1ರಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ನೀಡಲು ಸರ್ಕಾರ ಚಿಂತನೆ ನಡೆಸಿರುವುದು, ಮಗುವನ್ನು ಕತ್ತಲೆಯ ಕಡೆಗೆ ತಳ್ಳುವಂತಿದೆ. ಮಗು ನಿಸರ್ಗದೊಡನೆ ಬೆಳೆಯಬೇಕೇ ಹೊರತು ನಾಲ್ಕು ಗೋಡೆಗಳ ಮಧ್ಯದಲ್ಲಿ ಅಲ್ಲ. ಮೇಲಾಗಿ, ಶಾಲೆಯು ಕೇವಲ ಅಂಕ ಗಳಿಸುವ ಅಥವಾ ಉದ್ಯೋಗಕ್ಕೆ ತರಬೇತಿ ನೀಡುವ ಕುಲುಮೆಯಲ್ಲ. ಅದು ಮಕ್ಕಳಿಗೆ ವಿಶ್ವದರ್ಶನ ಮಾಡಿಸುವ ಮಹಾಮಂದಿರ.
ಇಂದಿನ ಮಕ್ಕಳು ಈಗಾಗಲೇ ಮೊಬೈಲ್, ಟಿ.ವಿ., ಕಂಪ್ಯೂಟರ್ ಗೀಳಿನಿಂದ ಹೊರಬರಲಾಗದೆ ಕಲಿಕಾ ಆಸಕ್ತಿ ಕಡಿಮೆಯಾಗುತ್ತಿದೆ. ಒಮ್ಮೆ ಗೇರು ಬೀಜ ತಿಂದು ರುಚಿ ನೋಡಿದ ಮಕ್ಕಳು ಶೇಂಗಾ ಬೀಜ ತಿನ್ನಲು ಒಪ್ಪುವುದಿಲ್ಲ. ಹೀಗಿರುವಾಗ ಮಕ್ಕಳನ್ನು ಮನೆಯಲ್ಲಿ ಕೂಡಿಹಾಕಿ ಆನ್ಲೈನ್ ಪಾಠ ಮಾಡಿ, ದೊಡ್ಡವರಾದ ಮೇಲೆ ಅವರು ‘ಮನೆಯಿಂದಲೇ ಕೆಲಸ’ಮಾಡಬೇಕಾದ ಕಂಪನಿಗೆ ಸೇರಿದರೆ, ಮುಂದೊಂದು ದಿನ ‘ಮನುಷ್ಯ ಎಂದರೆ ಯಾರು’ ಎಂಬ ಪ್ರಶ್ನೆಗೆ ರೊಬೋಟ್ ಉತ್ತರಿಸಬೇಕಾದೀತು.
-ಗಣಪತಿ ನಾಯ್ಕ,ಕಾನಗೋಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.