ADVERTISEMENT

ವಾಚಕರ ವಾಣಿ | ಮಹತ್ವದ ತೀರ್ಪು: ತಿಳಿವಳಿಕೆ ಮೂಡಿಸಬೇಕು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 19:31 IST
Last Updated 30 ಸೆಪ್ಟೆಂಬರ್ 2022, 19:31 IST

ಅವಿವಾಹಿತೆಯರೂ ಸೇರಿದಂತೆ ಎಲ್ಲ ಮಹಿಳೆಯರೂ ಭ್ರೂಣಕ್ಕೆ 24 ವಾರ ತುಂಬುವವರೆಗೆ ಸುರಕ್ಷಿತವಾಗಿ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಹೊಂದಿದ್ದಾರೆ ಎಂಬ ಸುಪ್ರೀಂ ಕೋರ್ಟ್‌ ತೀರ್ಪು (ಪ್ರ.ವಾ., ಸೆ. 30) ಸ್ವಾಗತಾರ್ಹ. ಹಳ್ಳಿಗರು ಹಾಗೂ ಬುಡಕಟ್ಟು ಜನರಲ್ಲಿ ಅನಕ್ಷರತೆ ಇರುವುದರಿಂದ ಇಂತಹ ತೀರ್ಪುಗಳು ಅವರನ್ನು ತಲುಪುವುದು ತೀರಾ ಕಡಿಮೆ. ಅದಕ್ಕಾಗಿ, ಗ್ರಾಮೀಣ ಪ್ರದೇಶಗಳ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಪ್ರಮುಖ ತೀರ್ಪುಗಳ ಕುರಿತು ಜಾಹೀರಾತುಗಳನ್ನು ಬಿತ್ತರಿಸಬೇಕು. ಇದರಿಂದ ಅವು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ತಲುಪಲು ಅನುಕೂಲವಾಗುತ್ತದೆ.⇒

- ವೀರಪ್ಪ ಈಟಿ,ಯರಗುಪ್ಪಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT