ಇತ್ತೀಚೆಗೆ ಆಳಸಮುದ್ರ ಮೀನುಗಾರಿಕೆಗೆ ಹೋಗಿದ್ದ ದೋಣಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಕೆಲವರು ನೀರುಪಾಲಾಗಿದ್ದಾರೆ. ಇಂಥ ದುರ್ಘಟನೆಗಳು ಇತ್ತೀಚೆಗೆ ಕಡಿಮೆಯಾಗಿದ್ದರೂ ಸಮುದ್ರ ಮೀನುಗಾರಿಕೆ ಅಥವಾ ನದಿ, ಕೆರೆ, ಹೊಂಡದ ಮೀನುಗಾರಿಕೆಯಲ್ಲಿ ತೊಡಗುವ ಪ್ರತಿಯೊಬ್ಬರೂ ಲೈಫ್ ಜಾಕೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಈ ಕನಿಷ್ಠ ಅಗತ್ಯ ಜ್ಞಾನದ ಸದುಪಯೋಗ ಹಾಗೂ ಮುಂಜಾಗ್ರತೆಯನ್ನು ನೀರಿಗಿಳಿಯುವ ಪ್ರತಿಯೊಬ್ಬರೂ ಪಾಲಿಸಬೇಕು. ಆಗ ಮಾತ್ರ ಎಂಥ ದುರ್ಘಟನೆಗಳಿಂದಲೂ ಅಪಾಯ, ದುರ್ಮರಣ ಪ್ರಮಾಣ ಕಡಿಮೆಯಾಗುತ್ತದೆ.
ಚನ್ನಬಸವ ಪುತ್ತೂರ, ಚಿತ್ರದುರ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.