ADVERTISEMENT

ಹೇಳುವುದು ಆಚಾರ...

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 17:22 IST
Last Updated 2 ಆಗಸ್ಟ್ 2021, 17:22 IST

‘ಕರ್ತವ್ಯ ನಿರ್ವಹಿಸಿದ ಮಠಾಧೀಶರ ಮಹಾಸಭಾ’ ಎಂಬ ಡಾ. ಶಿವಮೂರ್ತಿ ಮುರುಘಾ ಶರಣರ ಬರಹ
(ಪ್ರ.ವಾ., ಜುಲೈ 31) ಓದಿ ವ್ಯಥೆಯಾಯಿತು. ಅವರಿಗೆ ತಾವು ಹೇಳಬೇಕಿರುವುದೇನು ಎಂಬುದರ ಸ್ಪಷ್ಟತೆ ಇಲ್ಲದಿದ್ದುದು ಲೇಖನದಲ್ಲಿ ಎದ್ದು ಕಾಣುತ್ತಿತ್ತು.

ಈ ಒಂದು ತಿಂಗಳ ಕಾಲ ರಾಜ್ಯದಲ್ಲಿ ನಡೆದ ರಾಜಕೀಯ ಪ್ರಹಸನ ಮತ್ತು ಮಠಾಧೀಶರ ತತ್ವರಹಿತ ನಿಲುವುಗಳು ವಾಕರಿಕೆ ಬರಿಸುವಂತಿದ್ದವು. ಅವರ ಒಟ್ಟಾರೆ ಬರಹವನ್ನು ಸಾಂದ್ರೀಕರಿಸಿದಾಗ ಧ್ವನಿತವಾಗುವ ಎರಡು ಉಕ್ತಿಗಳೆಂದರೆ, ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಮತ್ತು ಹೇಳುವುದು ಆಚಾರ ತಿನ್ನುವುದು ಬದನೆಕಾಯಿ!

-ಆನಂದ ರಾಮತೀರ್ಥ,ಜಮಖಂಡಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.