ADVERTISEMENT

ಹೇರುವುದು ಬೇಡ ಹೊಸ ತೆರಿಗೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 19:30 IST
Last Updated 31 ಜನವರಿ 2021, 19:30 IST

ಇಂದು (ಫೆ. 1) ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಕೊರೊನಾ ವೈರಸ್‌ನಿಂದ ಪಾತಾಳಕ್ಕಿಳಿದ ದೇಶದ ಅರ್ಥವ್ಯವಸ್ಥೆಗೆ ಈ ಬಜೆಟ್ ಹೇಗೆ ಸಹಾಯಕವಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ದೇಶದ ಜನರಿದ್ದಾರೆ.

ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸಿದ, ಎದುರಿಸುತ್ತಿರುವ ವಲಯಗಳಿಗೆ ಸರ್ಕಾರ ಹೊಸ ತೆರಿಗೆ ವಿಧಿಸಿದರೆ ಅದು ‘ಸುಟ್ಟ ಗಾಯದ ಮೇಲೆ ಬರೆ ಎಳೆದಂತೆ’ ಆಗಬಹುದು. ಹೀಗಾಗಿ, ದೇಶದಲ್ಲಿ ಸರಕು- ಸೇವೆಗಳ ಉತ್ಪಾದನೆಹೆಚ್ಚಿಸುವುದರೊಂದಿಗೆ, ಉದ್ಯೋಗಾವಕಾಶಗಳ ಸೃಷ್ಟಿಗೆ ಕೇಂದ್ರ ಬಜೆಟ್ ಗಮನ ನೀಡಬೇಕಾಗಿದೆ.

ಏಕೆಂದರೆ, ದುಡಿಯುವ ಕೈಗಳಿಗೆ ಕೆಲಸ ಇದ್ದಾಗ, ಅವರ ಆದಾಯ ಹೆಚ್ಚುವುದರೊಂದಿಗೆ ಅನುಭೋಗವೂ ಹೆಚ್ಚುತ್ತದೆ. ಇದರಿಂದ ಆರ್ಥಿಕ ಚಟುವಟಿಕೆಗೆ ನೆರವಾಗುತ್ತದೆ. ಹೀಗಾಗಿ ಕೇಂದ್ರ ಬಜೆಟ್‌ನ ಗಮನ ಹೊಸ ತೆರಿಗೆ ವಿಧಿಸುವುದರ ಬದಲು ಬೇಡಿಕೆ ಹೆಚ್ಚಿಸುವತ್ತ ಇರಲಿ.

ADVERTISEMENT

ನಿರ್ಮಲ ನಾಗೇಶ್, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.