ADVERTISEMENT

ವಾಚಕರ ವಾಣಿ: ಮೌಲ್ಯಮಾಪಕರಿಗೆ ಬೇಕು ಬದ್ಧತೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 22:30 IST
Last Updated 7 ಆಗಸ್ಟ್ 2022, 22:30 IST

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರ ಪೈಕಿ 219 ವಿದ್ಯಾರ್ಥಿಗಳು ಮರುಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವುದು ವರದಿಯಾಗಿದೆ (ಪ್ರ.ವಾ., ಆ.5). ಅದರಲ್ಲೂ 40 ಅಂಕ ಗಳಿಸಿದ್ದ ವಿದ್ಯಾರ್ಥಿಯೊಬ್ಬರಿಗೆ ಮರುಮೌಲ್ಯಮಾಪನದ ನಂತರ 99 ಅಂಕಗಳು ಲಭಿಸಿವೆ. ಈ ಸುದ್ದಿಯು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ನಿಜಕ್ಕೂ ಗಾಬರಿ ಮೂಡಿಸುವಂತಹುದು.

ಎಷ್ಟು ಮಂದಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುವ ತಾಳ್ಮೆ ಮತ್ತು ಹಣ ಇರುತ್ತದೆ? ನಪಾಸಾದ ವಿದ್ಯಾರ್ಥಿಯು ಒಂದು ವೇಳೆ ದುಡುಕಿ ತನ್ನ ಜೀವಕ್ಕೇ ಕೇಡು ಮಾಡಿಕೊಂಡ ನಂತರ ಉತ್ತೀರ್ಣ ಎಂಬ ಫಲಿತಾಂಶ ಬಂದರೆ ಅದರ ಹೊಣೆ ಯಾರದ್ದು? ಉತ್ತರಪತ್ರಿಕೆ ಉತ್ತರಗಳನ್ನು ಪರಿಶೀಲಿಸುವ ಮೌಲ್ಯಮಾಪಕರು ಅಂಕಗಳನ್ನು ಕೂಡುವಾಗ ತಪ್ಪು ಮಾಡುವುದೇಕೆ? ಅದು ಉದಾಸೀನವೇ? ಅಥವಾ ಹೆಚ್ಚಿನ ಒತ್ತಡವೇ? ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮೌಲ್ಯಮಾಪಕರಿಗೆ ಹೆಚ್ಚಿನ ಬದ್ಧತೆ ಇರಬೇಕು.

ಪತ್ತಂಗಿ ಎಸ್. ಮುರಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.