ಇತ್ತೀಚೆಗೆ ಸುರಿದ, ಸುರಿಯುತ್ತಿರುವ ಭಾರಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಷ್ಟ, ಪಶುಪಕ್ಷಿ, ಮಾನವ ಜೀವಹಾನಿ ಆಗಿರುವುದು ದುಃಖಕರ. ಈಗ ಬಹುತೇಕ ಊರುಗಳ ಕೆರೆ, ಕಟ್ಟೆಗಳು, ಹಳ್ಳಗಳು ಮೈದುಂಬಿ ಹರಿದು ರಸ್ತೆಯ ಮೇಲೆಲ್ಲ ನೀರು ಹರಿಯುತ್ತಿದೆ. ಆದರೂ ಕೆಲ ದ್ವಿಚಕ್ರ ವಾಹನ ಸವಾರರು, ಖಾಸಗಿ ಬಸ್ಗಳ ಚಾಲಕರು ಅಪಾಯದ ಸಂಭವ ಗೊತ್ತಿದ್ದೂ ನೀರಿಗಿಳಿಯುವ ದುಸ್ಸಾಹಸ ಮಾಡಿದ ಚಿತ್ರಗಳನ್ನು ಪತ್ರಿಕೆಗಳಲ್ಲಿ ದಿನನಿತ್ಯ ಕಾಣಬಹುದು. ನೀರಿನ ಸೆಳೆತ ಕೆಲವೊಮ್ಮೆ ಎಂಥವರಿಗೂ ಎಟುಕದು. ವಿನಾಕಾರಣ ಅಪಾಯಕ್ಕೆ ಒಡ್ಡುಕೊಳ್ಳುವುದು ವಿವೇಕಯುತ ನಡೆಯಲ್ಲ.
ಆರ್.ಟಿ. ವೆಂಕಟೇಶ್ ಬಾಬು,ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.