ADVERTISEMENT

ವಾಚಕರ ವಾಣಿ | ಬಾಡಿಗೆ ತಾಯ್ತನ: ನೈತಿಕ ಬಡತನ ಬಾರದಿರಲಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 22:00 IST
Last Updated 9 ಆಗಸ್ಟ್ 2022, 22:00 IST

ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ಕಾಯ್ದೆಯಲ್ಲಿನ ಅಂಶಗಳನ್ನು ಡಾ. ಗೀತಾ ಕೃಷ್ಣಮೂರ್ತಿ ಚೆನ್ನಾಗಿ ವಿವರಿಸಿದ್ದಾರೆ (ಪ್ರ.ವಾ., ಆ. 9). ಆದರೆ ಬಾಡಿಗೆ ತಾಯ್ತನಕ್ಕೆ ಇರುವ ಅವಕಾಶವನ್ನೇ ರದ್ದು ಮಾಡುವುದು ಸೂಕ್ತ. ದೇಶದಲ್ಲಿ ಲಕ್ಷಾಂತರ ಮಕ್ಕಳು, ಹಸುಗೂಸುಗಳು ಅನಾಥಾಶ್ರಮಗಳಲ್ಲಿ ಬೆಳೆಯುತ್ತಿವೆ. ಮಕ್ಕಳಿಲ್ಲದವರು ಇಂತಹ ಮಕ್ಕಳನ್ನೇ ದತ್ತು ಪಡೆದು ಅವುಗಳ ಜೀವನಕ್ಕೆ ಭದ್ರತೆ ಒದಗಿಸಲು ನಮ್ಮ ದೇಶದ ಕಾನೂನಿನಲ್ಲಿ ಅವಕಾಶ ಇದೆ. ಅದರ ಪ್ರಯೋಜನ ಪಡೆಯಬೇಕು. ಮಹಿಳೆಯ ಜೀವನದಲ್ಲಿ ಬರುವ ಪವಿತ್ರ ಮತ್ತು ಭಾವನಾತ್ಮಕ ಹಂತವಾದ ತಾಯ್ತನದ ವಾಣಿಜ್ಯೀಕರಣವನ್ನು ತಪ್ಪಿಸಲು ಇದರಿಂದ ಸಾಧ್ಯವಾಗುತ್ತದೆ.

-ಕಲ್ಮೇಶ್ ಬಿರಾದಾರ,ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT