ADVERTISEMENT

ವಾಚಕರ ವಾಣಿ: ಗಂಟು ರೋಗ: ಹೆಚ್ಚಿನ ಸ್ಪಂದನ ಅಗತ್ಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಅಕ್ಟೋಬರ್ 2022, 21:30 IST
Last Updated 24 ಅಕ್ಟೋಬರ್ 2022, 21:30 IST

ಮಧ್ಯ ಕರ್ನಾಟಕದಲ್ಲಿ ದೀಪಾವಳಿ ವಿಶೇಷವೆಂದರೆ, ದನಕರುಗಳನ್ನು ಸಿಂಗರಿಸಿ, ಪೂಜಿಸಿ ಮೆರವಣಿಗೆ ಮಾಡುವುದು. ಹೋರಿಗಳಿಗೆ ಕೊಬ್ಬರಿ ಕಟ್ಟಿ ಪರ್ಸಿಯಲ್ಲಿ (ಹೋರಿಗಳನ್ನು ಬಿಡುವ ಸ್ಥಳ) ಬಿಟ್ಟು ಖುಷಿಪಡುವುದು. ಇನ್ನೂ ವಿಶೇಷವೆಂದರೆ, ಇಂತಹ ಸ್ಪರ್ಧೆಗೆ ಬಹುಮಾನಗಳು ಇರುತ್ತವೆ.

ಈ ಹಬ್ಬವು ಕೊರೊನಾದ ಕರಿಛಾಯೆಯಿಂದ ಈ ಹಿಂದಿನ ಎರಡು ವರ್ಷ ರಂಗು ಕಳೆದುಕೊಂಡಿತ್ತು. ಈಗ ಕೊರೊನಾ ಬಾಧೆ ಇಲ್ಲ. ಆದರೆ ರಾಸುಗಳಿಗೆ ಕಾಣಿಸಿಕೊಂಡ ಗಂಟು ರೋಗವು ಉಲ್ಬಣಿಸುವ ಮೂಲಕ ಹಬ್ಬದ ಸಂಭ್ರಮವನ್ನು ಕಿತ್ತುಕೊಂಡಿದೆ. ಸರ್ಕಾರ ಈಗಾಗಲೇ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಇನ್ನೂ ಹೆಚ್ಚಿನ ಸ್ಪಂದನ ಅಗತ್ಯ. ಔಷಧೋಪಚಾರವು ತ್ವರಿತವಾಗಿ ಸಿಗುವಂತೆ ಆಗಬೇಕು.

-ಶೈಲಾ ಭ. ಕೊಪ್ಪದ,ಉಪ್ಪುಣಸಿ, ಹಾನಗಲ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.