ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ಹರಾಜು ಕೂಗಿ, ಬೆದರಿಕೆ ಒಡ್ಡಿ ಕೊಂಡುಕೊಳ್ಳುತ್ತಿರುವ ವಿಷಯ ತಿಳಿದು ಮನಸ್ಸಿಗೆ ಆಘಾತವಾಯಿತು. ‘ನಿಜವಾದ ಪ್ರಜಾಪ್ರಭುತ್ವ ಇರಬೇಕಾದರೆ ಗ್ರಾಮಗಳಿಗೆ ಅಧಿಕಾರ ನೀಡಬೇಕು’ ಎಂದು ಗಾಂಧೀಜಿ ಹೇಳಿದ್ದರು. ಆದರೆ ಇಂದು ನಾವೆಲ್ಲಾ ಇರುವುದು ನಿಜವಾದ ಅರ್ಥವುಳ್ಳ ಪ್ರಜಾಪ್ರಭುತ್ವದ ವ್ಯವಸ್ಥೆಯ ಅಡಿಯಲ್ಲಿಯೇ? ಈಗ ಇರುವಂತಹ ವ್ಯವಸ್ಥೆಯನ್ನು ಹೀಗೇ ಬೆಳೆಯಲು ಬಿಟ್ಟರೆ ಮುಂದೊಂದು ದಿನ, ಮೂಲ ಅರ್ಥವುಳ್ಳ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅದು ನುಂಗಿಬಿಡಬಹುದು.
- ಲೋಕೇಶ್ ವೈ.ಎಂ.,ಹಾಸನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.