ನಮಗೆ ಗೌತಮ ಬುದ್ಧ ಬೇಕು, ಅವರ ವಿಚಾರ ಬೇಕಾಗಿಲ್ಲ. ನಮಗೆ ಬಸವಣ್ಣ ಬೇಕು, ಅವರ ಸಂದೇಶ ಬೇಕಾಗಿಲ್ಲ. ನಮಗೆ ಅಂಬೇಡ್ಕರ್ ಬೇಕು, ಅವರ ಸಾಮಾಜಿಕ ಕಾಳಜಿ ಬೇಕಾಗಿಲ್ಲ. ನಮಗೆ ಕಾರ್ಲ್ ಮಾರ್ಕ್ಸ್ ಬೇಕು, ಅವರ ಕಾರ್ಮಿಕಪರ ಚಿಂತನೆ ಬೇಕಾಗಿಲ್ಲ. ನಮಗೆ ಮನುಷ್ಯರು ಬೇಕು, ಆದರೆ ಮನುಷ್ಯತ್ವ ಇದ್ದವರು ಬೇಕಾಗಿಲ್ಲ. ಈ ದೇಶದಲ್ಲಿ ಎಲ್ಲರೂ ಬರೀ ಮೂರ್ತಿಪೂಜಕರೇ ಆಗಿದ್ದಾರೆ ಹೊರತು ವಿಚಾರಪೂಜಕರು ಆಗದಿರುವುದು ದುರದೃಷ್ಟಕರ.
- ಬಸವರಾಜ ಪಾಸ್ವಾನ ಕುಮಸಿ, ಕಲಬುರ್ಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.