ಸವಿತಾ ಸಮಾಜದ ಅಭಿವೃದ್ಧಿಗೆ ₹ 25 ಕೋಟಿನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿರುವುದು (ಪ್ರ.ವಾ., ಫೆ.13) ಶ್ಲಾಘನೀಯ.
ಯಾವುದೇ ಶುಭ ಸಮಾರಂಭ ನಡೆಯಬೇಕಾದರೂ ಅಲ್ಲಿ ಮಂಗಳವಾದ್ಯವೇ ಪ್ರಧಾನ. ರಥೋತ್ಸವಗಳು ನಡೆಯುವಾಗಲೂ ಮಂಗಳವಾದ್ಯ ಇರಲೇಬೇಕು. ಆದರೆ, ಇಂತಹ ವಾದ್ಯಗಳನ್ನು ನುಡಿಸುವವರ ಸಂಖ್ಯೆ ಈಗ ಕಡಿಮೆಯಾಗುತ್ತಿದೆ. ಹೀಗಾಗಿ, ಇಂತಹವರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು ಒಂದು ಪ್ರತ್ಯೇಕ ಶಾಲೆಯನ್ನು ಆ ಕಲೆಯಲ್ಲಿ ನಿಷ್ಣಾತರಾದವರ ನೇತೃತ್ವದಲ್ಲಿ ನಮ್ಮ ರಾಜ್ಯದಲ್ಲಿ ಸ್ಥಾಪಿಸಬೇಕಾಗಿದೆ.
→ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.