ಕೆಲವು ರಾಜಕಾರಣಿಗಳ ‘ಕುಟುಂಬಪ್ರೀತಿ’ ದಿನೇ ದಿನೇ ಹೆಚ್ಚುತ್ತಲೇ ಇದೆ.ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಸಂಘ-ಸಂಸ್ಥೆಗಳ ಚುನಾವಣೆಗಳಲ್ಲಿ ಪುತ್ರ ವ್ಯಾಮೋಹದ ಮೇಲಾಟ ಜೋರಾಗಿದೆ.
ಪುತ್ರರನ್ನು ತಮ್ಮ ಉತ್ತರಾಧಿಕಾರಿಗಳೆಂಬಂತೆ ಬಿಂಬಿಸುವ ಪರಿಪಾಟ ಎಗ್ಗಿಲ್ಲದೆ ಸಾಗಿದೆ. ಜೊತೆಗೆ ರಕ್ತಸಂಬಂಧಿಗಳು ಮತ್ತು ಆಪ್ತೇಷ್ಟರಿಗೆ ಆದ್ಯತೆ ನೀಡುತ್ತಿರುವುದು ಎದ್ದು ಕಾಣಿಸುತ್ತದೆ. ಇದು ರಾಜ್ಯಪ್ರಭುತ್ವವಲ್ಲ, ಪ್ರಜಾಪ್ರಭುತ್ವ. ದ್ರೋಣಾಚಾರ್ಯರಂತಹ ಮಹಾನುಭಾವರಿಗೂ ಆಪತ್ತು ತಂದದ್ದು ಪುತ್ರ ವ್ಯಾಮೋಹ ಎಂಬುದನ್ನು ಮರೆಯಬಾರದು.
ಬಸವಪ್ರಸಾದ ಸಂಕಪಾಳ, ನೇರ್ಲಿ, ಬೆಳಗಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.