ಒಂದು ದೇಶಕ್ಕೆ ಆರ್ಥಿಕ ಕ್ರಮಶಿಕ್ಷಣ, ದೂರದೃಷ್ಟಿ ಇಲ್ಲದಿದ್ದರೆ ಅದರ ಪರಿಣಾಮಗಳು ಯಾವ ರೀತಿ ಇರುತ್ತವೆ ಎಂಬುದನ್ನು ತಿಳಿಯಲು ನಮ್ಮ ನೆರೆಯ ಶ್ರೀಲಂಕಾವನ್ನು ನೋಡಬಹುದು. ಸಾಮರ್ಥ್ಯ ಮೀರಿದ ಸಾಲ, ಮುಂದಾಲೋಚನೆ ಇಲ್ಲದ ಯೋಜನೆಗಳು ಶ್ರೀಲಂಕಾವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿವೆ. ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕು ಶೋಚನೀಯವಾಗಿದೆ. ಶ್ರೀಲಂಕಾದ ಈ ಪರಿಸ್ಥಿತಿಯಿಂದ ಇತರ ದೇಶಗಳು, ರಾಜ್ಯಗಳು ಹಾಗೂ ಜನರು ವೈಯಕ್ತಿಕವಾಗಿ ಯಾವ ರೀತಿಯ ನಿರ್ಣಯ ತೆಗೆದುಕೊಳ್ಳಬೇಕು, ತೆಗೆದುಕೊಳ್ಳಬಾರದು ಎಂಬ ಪಾಠ ಕಲಿಯಬಹುದಾಗಿದೆ.
- ಚನ್ನಕೇಶವ ಜಿ.ಕೆ.,ತರೀಕೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.