ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ಶುನಕದ (ನಾಯಿ) ಕಡಿತಕ್ಕಾಗಿ ಅನ್ನ ಹಾಕಿದವರಿಗೇ ಶಿಕ್ಷೆ ಆಗುವುದಾದರೆ, ಮತದಾರರನ್ನು ಗಾಸಿಗೊಳಿಸಿ ಗೆಲುವಿನ ಸಮೇತ ಬೇರೆ ಪಕ್ಷ ಸೇರುವ ಶಾಸಕರ ಕೃತ್ಯಕ್ಕೂ ಮತದಾರರಿಗೇ ಶಿಕ್ಷೆ ನೀಡಬೇಕು. ಏಕೆಂದರೆ, ಅಲ್ಲಿ ಆ ಪ್ರಾಣಿ ಮುಂದೊಂದು ದಿನ ಕಚ್ಚುವುದೆಂದು ಭಾವಿಸದೆ ಅನ್ನ ಹಾಕಿ ತಪ್ಪು ಮಾಡಿದವರೇ, ಇಲ್ಲಿ ಈ ‘ಪ್ರಾಣಿ’ಯ ಮುಂದಿನ ನಡೆ ಅರಿಯದೆ ಮತ ಹಾಕಿ ತಪ್ಪು ಮಾಡಿರುತ್ತಾರೆ.
-ತಾ.ಸಿ.ತಿಮ್ಮಯ್ಯ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.