ಪ್ಲಾಸ್ಮಾ ಜಲ ವಿಜ್ಞಾನ ಕುರಿತ ನಾಗೇಶ ಹೆಗಡೆ ಅವರ ಲೇಖನ (ಪ್ರ.ವಾ., ಜೂನ್ 13) ಮಾಹಿತಿಪೂರ್ಣವಾಗಿತ್ತು. ಮಳೆಗಾಲದ ದಿನಗಳಲ್ಲಿ ಸಾಮಾನ್ಯವಾಗಿ ಆಗುವ ಗುಡುಗು– ಮಿಂಚಿನಲ್ಲಿ ಅಸಾಮಾನ್ಯ ವೈಜ್ಞಾನಿಕ ಕ್ರಿಯೆ ಉಂಟಾಗುವುದನ್ನು ಓದಿದಾಗ, ಈ ಸೃಷ್ಟಿಯು ತನ್ನಲ್ಲಿ ಅಡಗಿಸಿಕೊಂಡಿರುವ ಕೌತುಕಗಳ ಬಗ್ಗೆ ದಿಗ್ಭ್ರಮೆಯಾಯಿತು. ಹಸಿರಿಗೆ ಉಸಿರಾಗುವ ದೇವನು ಮಾನವರ ಮನ-ಮನಗಳಲ್ಲೂ ಮೇಳೈಸಿ, ಮನುಜ ಪಥವನ್ನು ಬೆಳೆಸಿದರೆ ಎಷ್ಟು ಚೆಂದ ಎನಿಸಿತು!
–ರೇಷ್ಮಾ ಜಿ.ಎಂ.,ಕೊಟ್ಟೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.