ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಇಡೀ ವಿಶ್ವವೇ ಹೈರಾಣಾಗುತ್ತಿರುವ ಬೆಳವಣಿಗೆಯು ನಾವು ಬೆಚ್ಚಿ ಬೀಳುವಂತೆ ಮಾಡುತ್ತಿದೆ. ಇದರ ನಡುವೆಯೇ ನಮ್ಮ ದೇಶದಲ್ಲಿ ಚೇತರಿಕೆಯ ಪ್ರಮಾಣ ಕೂಡ ಹೆಚ್ಚುತ್ತಿರುವುದು ಆಶಾದಾಯಕ ಸಂಗತಿ. ಕೋವಿಡ್ ಎಂಬ ಕೂಗುಮಾರಿ ಇಡೀ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿ, ಜನರ ಆರ್ಥಿಕ ಹಾಗೂ ಸಾಮಾಜಿಕ ಬದುಕನ್ನೇ ಏರುಪೇರುಗೊಳಿಸಿ, ನಿರುದ್ಯೋಗವನ್ನು ಇಮ್ಮಡಿಗೊಳಿಸಿ ನಾಗಾಲೋಟದಲ್ಲಿ ಮುಂದೆ ಸಾಗುತ್ತಿದ್ದರೂ ಅದೇ ವೇಗದಲ್ಲಿ ಸೋಂಕಿತರು ಗುಣಮುಖರಾಗುತ್ತಿರುವುದು ಭರವಸೆಯ ಬೆಳಕಾಗಿದೆ. ಕೋವಿಡ್ ಪೀಡಿತರು ಭಯಪಡುವ ಅಗತ್ಯ ಇಲ್ಲ. ಎಲ್ಲ ಕಾಯಿಲೆಗಳ ಹಾಗೆ ಕೋವಿಡ್ ಕೂಡ ಸಾಮಾನ್ಯ ಕಾಯಿಲೆಯ ಸ್ವರೂಪ ಪಡೆಯಲು ಹೆಚ್ಚು ದಿನಗಳು ಬೇಕಾಗಿಲ್ಲ ಎನಿಸುತ್ತದೆ.
ಕೆ.ವಿ.ವಾಸು, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.