ADVERTISEMENT

ವಾಚಕರ ವಾಣಿ: ಜಾತೀಯತೆಯ ಹೊಂಡದಲ್ಲಿ ಆಶಾದಾಯಕ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 19:30 IST
Last Updated 29 ನವೆಂಬರ್ 2021, 19:30 IST

ಸ್ವಾತಂತ್ರ್ಯ ಲಭಿಸಿ 75 ವರ್ಷ ಗತಿಸಿದರೂ ಜಾತೀಯತೆ ಅಳಿದಿಲ್ಲವೆಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ (ಪ್ರ.ವಾ., ನ. 29). ಜಾತೀಯತೆ ಅಳಿದಿಲ್ಲವಷ್ಟೇ ಅಲ್ಲ ಜಾತೀಯತೆಯಿಂದ ಉಂಟಾಗುತ್ತಿರುವ ಶ್ರೇಷ್ಠತೆಯ ಅಹಂಕಾರವು ದಮನಿತ ಜನಾಂಗಕ್ಕೆ ಮಾಡುತ್ತಿರುವ ಅವಮಾನ ನಿಜಕ್ಕೂ ಅಸಹನೀಯವಾಗಿದೆ. ಅಷ್ಟೇ ಅಲ್ಲದೆ ರಾಜಕಾರಣಿಗಳು ಕೂಡ ಜಾತಿಯ ದಳ್ಳುರಿಗೆ ತುಪ್ಪ ಸುರಿಯುತ್ತಿರುವುದು ಒಂದು ದುರಂತವೇ ಆಗಿದೆ.

ಭಕ್ತರೆಲ್ಲ ಸಮಾನರು ಎಂದೇ ಬೋಧಿಸಬೇಕಿದ್ದ ಧಾರ್ಮಿಕ ಸಂಸ್ಥೆಗಳು ಕೂಡ ಜಾತೀಯತೆಗೆ ನೀರೆರೆಯುತ್ತಿರು ವುದನ್ನು ನೋಡಿದರೆ ನಾವು ಯಾವ ದಿಕ್ಕಿನತ್ತ ಹೊರಟಿದ್ದೇವೆಂದು ಬೇಸರವಾಗುತ್ತಿದೆ. ಈ ಎಲ್ಲದರ ಮೊತ್ತ ನಮ್ಮ ಶ್ರೇಷ್ಠ ಸಂವಿಧಾನವನ್ನು ಬದಿಗೆ ಸರಿಸುವುದೇ ಆಗಿದೆ. ಈ ಕುರಿತು ನಮ್ಮ ನ್ಯಾಯಪೀಠಗಳಾದರೂ ಎಚ್ಚರಿಕೆ ನೀಡುತ್ತಿ ರುವುದು ಒಂದು ಆಶಾದಾಯಕ ಬೆಳವಣಿಗೆ.

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.