ADVERTISEMENT

ಸ್ಮಾರಕ ರಕ್ಷಣೆಯಾಗಲಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 20:00 IST
Last Updated 19 ಜುಲೈ 2019, 20:00 IST

ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿರುವ ವ್ಯಾಸರಾಜತೀರ್ಥರ ವೃಂದಾವನವನ್ನು ದುಷ್ಕರ್ಮಿಗಳು ಧ್ವಂಸ ಮಾಡಿರುವುದು ವಿಷಾದನೀಯ.

ಐತಿಹಾಸಿಕ ಸ್ಮಾರಕಗಳನ್ನು ಹಾಳು ಮಾಡುವ ಸಮಾಜಘಾತುಕ ಶಕ್ತಿಗಳು ಇತ್ತೀಚೆಗೆ ಬಲಗೊಳ್ಳುತ್ತಿವೆ. ದೇಶದಲ್ಲಿ ಸಾಂಸ್ಕೃತಿಕ ಸ್ಮಾರಕಗಳು ಬಹಳಷ್ಟಿದ್ದು, ಸೂಕ್ತ ಭದ್ರತೆಯ ಕೊರತೆ ಎದುರಿಸುತ್ತಿವೆ. ಕೆಲವೆಡೆ ನಿಧಿ ಕಳ್ಳರಿಗೆ ಅವು ಬಲಿಯಾಗುತ್ತಿವೆ.

ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಬೇಕಾದ ಹೊಣೆ ಭಾರತೀಯ ಪುರಾತತ್ವ ಇಲಾಖೆಯದು. ಹಂಪಿಯ ಸುತ್ತಮುತ್ತಲಿನ ಸ್ಮಾರಕಗಳೂ ಇದೇ ಬಗೆಯ ಆತಂಕ ಎದುರಿಸುತ್ತಿರುವುದು ಆತಂಕಕಾರಿ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತು, ಸ್ಮಾರಕಗಳ ರಕ್ಷಣೆಗೆ ಪ್ರಾಮುಖ್ಯ ನೀಡಬೇಕು.

ADVERTISEMENT

ಬಿ.ಮೊಹಿದ್ದೀನ್ ಖಾನ್,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.