ADVERTISEMENT

ನ್ಯಾಯ ಒದಗಿಸಲು ಜಾತಿ ಬೇಕು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST

ಹೌದು ಜಾತಿ ಬೇಕು, ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ಮೇಲೆ ಆಗುವ ಅನ್ಯಾಯವನ್ನು ತಡೆದು ಕಾನೂನಿನ ಪ್ರಕಾರ ನ್ಯಾಯ ಒದಗಿಸಲು ಮತ್ತು ಅವರಿಗೆ ಸೌಕರ್ಯಗಳನ್ನು ಒದಗಿಸಲು ಜಾತಿ ಬೇಕು. ಜಾತಿ ಆಧಾರದ ಮೇಲೆ ಸಿಗುವ ಮೀಸಲಾತಿಯ ಸೌಕರ್ಯದಿಂದ ಈ ಕೆಳ ಜನಾಂಗವನ್ನು ಬಡತನ ಅನಕ್ಷರತೆ ಮೂಢನಂಬಿಕೆ ಗುಲಾಮಗಿರಿ ಮೊದಲಾದ ಅನಿಷ್ಠಗಳಿಂದ ಪಾರುಮಾಡಬಹುದು.

ನಾವು ದಲಿತರು ಈ ಜನಾಂಗದಲ್ಲಿಯೇ ಇರಲು ಇಷ್ಟಪಡುತ್ತೇವೆ. ಒಗ್ಗಟ್ಟಿನಿಂದ ಇರಲು ಇದು ಅನಿವಾರ್ಯ, ಒಗ್ಗಟ್ಟು ಮುರಿದರೆ ನಮಗೆ ಅಪಾಯ. ಇದಕ್ಕಾಗಿ ಜಾತಿ ಅನಿವಾರ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.