ದಾವಣಗೆರೆ: ದಾವಣಗೆರೆ ವಲಯ ಮಟ್ಟದ ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್ಷಿಪ್’ನ ಅಂತಿಮ ಸುತ್ತಿಗೆ ಆರು ತಂಡಗಳು ಆಯ್ಕೆಯಾಗಿವೆ.
ಭಾರತೀಯ ವಿದ್ಯಾಭವನ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ, ಶ್ರೀ ಆದಿಚುಂಚನಗಿರಿ ಪ್ರೌಢಶಾಲೆ, ಶ್ರೀ ರಾಮಕೃಷ್ಣ ವಿದ್ಯಾಲಯ, ಆದರ್ಶ ವಿದ್ಯಾಲಯ ಮತ್ತು ಮಾಗನೂರು ಬಸಪ್ಪ ಪ್ರೌಢಶಾಲೆ ಅಂತಿಮ ಸುತ್ತಿಗೆ ಆಯ್ಕೆಯಾಗಿವೆ.
ಒಟ್ಟು 12 ಮಂದಿ ವಿದ್ಯಾರ್ಥಿಗಳು ವಲಯ ಮಟ್ಟದ ಸ್ಪರ್ಧೆಯ ಅಂತಿಮ ಕಣದಲ್ಲಿದ್ದಾರೆ. ನಗರದ ಗುಂಡಿ ಮಹಾದೇವಪ್ಪ ಸಭಾಂಗಣದಲ್ಲಿ ವಲಯ ಮಟ್ಟದ ಸ್ಪರ್ಧೆ ನಡೆಯುತ್ತಿದೆ.
ಅಂತಿಮ ಸುತ್ತಿನಲ್ಲಿರುವ ಶಾಲೆಗಳು ಹಾಗೂ ವಿದ್ಯಾರ್ಥಿಗಳ ವಿವರ:
1) ಭಾರತೀಯ ವಿದ್ಯಾಭವನ – ಚಿನ್ಮಯ, ಪೃಥ್ವಿ
2) ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ– ರಿತಿನ್, ಸುಜನ್
3) ಶ್ರೀ ಆದಿಚುಂಚನ ಗಿರಿ ಪ್ರೌಢಶಾಲೆ– ಪ್ರಧ್ಯುಮ್ನ, ಅಕ್ಷಯ್
4) ಶ್ರೀ ರಾಮಕೃಷ್ಣ ವಿದ್ಯಾಲಯ– ಸಚಿನ್, ಹೇಮಂತ್
5) ಮಾಗನೂರು ಬಸಪ್ಪ ಪ್ರೌಢಶಾಲೆ– ಸುಹಾಸ್, ಹರ್ಷ
6) ಆದರ್ಶ ವಿದ್ಯಾಲಯ– ಶಾಲಿನಿ, ಪೂಜಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.