ಮಂಗಳೂರು: ಮಂಗಳೂರು ವಲಯದ 'ಪ್ರಜಾವಾಣಿ ಕ್ವಿಜ್ ಚಾಂಪಿಯನ್ಶಿಪ್’ ನಲ್ಲಿ ಉಡುಪಿಯ ವಿದ್ಯೋದಯ ಶಾಲೆ ಪ್ರಥಮ ಸ್ಥಾನ ಪಡೆದಿದೆ.
ಶಾರದಾ ವಿದ್ಯಾಲಯ ದ್ವಿತೀಯ ಸ್ಥಾನ ಹಾಗೂ ಉಜಿರೆಯ ಎಸ್ ಡಿಎಂ ಶಾಲೆ ತೃತೀಯ ಸ್ಥಾನ ಪಡೆದವು.
ವಿದ್ಯೋದಯ ಶಾಲೆ ತಂಡ 85, ಶಾರದಾ ವಿದ್ಯಾಲಯದ ತಂಡ 55 ಹಾಗೂ ಎಸ್ ಡಿಎಂ ಶಾಲೆ 30 ಅಂಕ ಪಡೆದವು.
ಡಿಡಿಪಿಐ ವೈ.ಶಿವರಾಮಯ್ಯ ಹಾಗೂ ಐಎಂಎ ಮಂಗಳೂರು ಘಟಕದ ಅಧ್ಯಕ್ಷ ಕೆ.ಆರ್. ಕಾಮತ್ ಬಹುಮಾನ ವಿತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.