ಬೆಂಗಳೂರು: ಹಿತೇಶ್ ಯಾದವ್ (27ಕ್ಕೆ4) ದಾಳಿಗೆ ತತ್ತರಿಸಿದ ಕರ್ನಾಟಕ ತಂಡದವರು ವಿನೂ ಮಂಕಡ್ ಟ್ರೋಫಿ 19 ವರ್ಷದೊಳಗಿನವರ ವಲಯ ಲೀಗ್ ಕ್ರಿಕೆಟ್ ಪಂದ್ಯದಲ್ಲಿ 6 ವಿಕೆಟ್ಗಳಿಂದ ಹೈದರಾಬಾದ್ ವಿರುದ್ಧ ಸೋತಿದ್ದಾರೆ.
ಆಲೂರಿನ ಒಂದನೇ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ 33 ಓವರ್ಗಳಲ್ಲಿ 7 ವಿಕೆಟ್ಗೆ 149ರನ್ ಗಳಿಸಿತು. ಸುಲಭ ಗುರಿಯನ್ನು ಹೈದರಾಬಾದ್ ತಂಡ 31.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಮುಟ್ಟಿತು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ:33 ಓವರ್ಗಳಲ್ಲಿ 7 ವಿಕೆಟ್ಗೆ 149 (ದೇವದತ್ತ ಪಡಿಕ್ಕಲ್ 37, ಲವನೀತ್ ಸಿಸೋಡಿಯಾ 21, ಮನೋಜ್ ಬಾಂಢಗೆ 28; ಹಿತೇಶ್ ಯಾದವ್ 27ಕ್ಕೆ4).
ಹೈದರಾಬಾದ್: 31.4 ಓವರ್ಗಳಲ್ಲಿ 4 ವಿಕೆಟ್ಗೆ 150 (ಪ್ರಜ್ಞಾ ರೆಡ್ಡಿ ಔಟಾಗದೆ 79, ಬಿ.ಎಂ. ಶ್ರೇಯಸ್ 31ಕ್ಕೆ2).
ಫಲಿತಾಂಶ: ಹೈದರಾಬಾದ್ ತಂಡಕ್ಕೆ 6 ವಿಕೆಟ್ ಜಯ.
ಗೋವಾ: 36 ಓವರ್ಗಳಲ್ಲಿ 87 (ಅಜಿತ್ ರಾಮ್ 8ಕ್ಕೆ3, ಎಸ್.ಕಿಶನ್ ಕುಮಾರ್ 9ಕ್ಕೆ3).
ತಮಿಳುನಾಡು: 26 ಓವರ್ಗಳಲ್ಲಿ 4 ವಿಕೆಟ್ಗೆ 88 (ಎಸ್.ನಿಧೀಶ್ ರಾಜಗೋಪಾಲ್ 23, ಬಲ್ಪ್ರೀತ್ ಸಿಂಗ್ 25ಕ್ಕೆ2).
ಫಲಿತಾಂಶ: ತಮಿಳುನಾಡು ತಂಡಕ್ಕೆ 6 ವಿಕೆಟ್ ಗೆಲುವು.
ಆಂಧ್ರ ಕ್ರಿಕೆಟ್ ಸಂಸ್ಥೆ: 31 ಓವರ್ಗಳಲ್ಲಿ 7 ವಿಕೆಟ್ಗೆ 164 (ಕೆ.ಮಹೀಪ್ ಕುಮಾರ್ 53; ಅಜಿತ್ ಜೇಕಬ್ 23ಕ್ಕೆ3).
ಕೇರಳ: 31 ಓವರ್ಗಳಲ್ಲಿ 7 ವಿಕೆಟ್ಗೆ 109 (ಅಖಿಲ್ ಸ್ಕಾರಿಯ ಔಟಾಗದೆ 51, ರಫಿ 12ಕ್ಕೆ2, ಗಿರಿನಾಥ್ ರೆಡ್ಡಿ 17ಕ್ಕೆ2).
ಫಲಿತಾಂಶ: ಆಂಧ್ರ ತಂಡಕ್ಕೆ 55ರನ್ಗಳ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.