ADVERTISEMENT

ಕ್ರಿಕೆಟ್‌ ಟೂರ್ನಿ: ಪ್ರಶಸ್ತಿ ಹಂಚಿಕೊಂಡ ಹೋಲಿ ಸೇಂಟ್‌

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 19:57 IST
Last Updated 27 ಅಕ್ಟೋಬರ್ 2017, 19:57 IST
ಕ್ರಿಕೆಟ್‌ ಟೂರ್ನಿ: ಪ್ರಶಸ್ತಿ ಹಂಚಿಕೊಂಡ ಹೋಲಿ ಸೇಂಟ್‌
ಕ್ರಿಕೆಟ್‌ ಟೂರ್ನಿ: ಪ್ರಶಸ್ತಿ ಹಂಚಿಕೊಂಡ ಹೋಲಿ ಸೇಂಟ್‌   

ಬೆಂಗಳೂರು: ಹೋಲಿ ಸೇಂಟ್‌ ಆಂಗ್ಲ ಶಾಲೆ ತಂಡದವರು ಕೆಎಸ್‌ಸಿಎ ಕಪ್‌ಗಾಗಿ ನಡೆದ 16 ವರ್ಷದೊಳಗಿನವರ ಗುಂಪು–1, ಡಿವಿಷನ್‌–1ರ ಕ್ರಿಕೆಟ್‌ ಲೀಗ್‌ ಟೂರ್ನಿಯಲ್ಲಿ ಎಬೆನೆಜರ್‌ ಇಂಟರ್‌ನ್ಯಾಷನಲ್‌ ಶಾಲೆಯ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದಾರೆ.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಎಬೆನೆಜರ್‌ ಶಾಲೆ 44.2 ಓವರ್‌ಗಳಲ್ಲಿ 60ರನ್‌ಗಳಿಗೆ ಆಲೌಟ್‌ ಆಯಿತು. ಗುರಿ ಬೆನ್ನಟ್ಟಿದ ಹೋಲಿ ಸೇಂಟ್‌ ತಂಡ 35 ಓವರ್‌ಗಳಲ್ಲಿ 6 ವಿಕೆಟ್‌ಗೆ 40ರನ್‌ ಗಳಿಸಿದ್ದ ವೇಳೆ ಮಳೆ ಸುರಿಯಿತು. ಹೀಗಾಗಿ ಪಂದ್ಯ ರದ್ದು ಮಾಡಲಾಯಿತು.

ಹೋಲಿ ಸೇಂಟ್‌ ತಂಡದ ಅರ್ಜುನ್‌ ಪರಿಣಾಮಕಾರಿ ದಾಳಿ ನಡೆಸಿ ಗಮನ ಸೆಳೆದರು. ಅವರು 22ರನ್‌ ನೀಡಿ 7 ವಿಕೆಟ್‌ ಉರುಳಿಸಿದರು. ಕೃಷ್ಣಮೂರ್ತಿ (13ಕ್ಕೆ3) ಉತ್ತಮ ಬೌಲಿಂಗ್‌ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.