
ಪ್ರಜಾವಾಣಿ ವಾರ್ತೆಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತಂಡದವರು ಚೆನ್ನೈಯಲ್ಲಿ ನಡೆದ 44ನೇ ಅಖಿಲ ಭಾರತ ವೈಎಸ್ಸಿಎ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದರು.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಎಸ್ಬಿಎಂ ತಂಡ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಚೆನ್ನೈ ಎದುರು 110 ರನ್ಗಳ ಗೆಲುವು ಸಾಧಿಸಿತು.
ಸಂಕ್ಷಿಪ್ತ ಸ್ಕೋರು: ಎಸ್ಬಿಎಂ 30 ಓವರ್ಗಳಲ್ಲಿ 6 ವಿಕೆಟ್ಗೆ 202. (ಕೌನೇನ ಅಬ್ಬಾಸ್ 21, ಬಿ. ಅಖಿಲ್ 68, ಅನಿರುದ್ಧ್ ಜೋಶಿ ಔಟಾಗದೆ 37, ಪವನ್ ದೇಶಪಾಂಡೆ ಔಟಾಗದೆ 27; ಅಚ್ಯುತ ರಾವ್ 40ಕ್ಕೆ2). ಐಒಬಿ ಚೆನ್ನೈ 29.4 ಓವರ್ಗಳಲ್ಲಿ 92. (ಭಾಸ್ಕರ್ ರೆಡ್ಡಿ 24; ಅಖಿಲ್ 18ಕ್ಕೆ3, ಪವನ್ ದೇಶಪಾಂಡೆ 24ಕ್ಕೆ3). ಫಲಿತಾಂಶ: ಎಸ್ಬಿಎಂಗೆ 110 ರನ್ ಗೆಲುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.