ADVERTISEMENT

`ಕ್ವಾರ್ಟರ್ ಫೈನಲ್ ಪ್ರವೇಶಿಸುವ ವಿಶ್ವಾಸವಿದೆ'

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಬೆಂಗಳೂರು: `ಈ ಸಲದ ರಣಜಿಯಲ್ಲಿ ಕೆಟ್ಟ ಆರಂಭ ಪಡೆದರೂ ಈಗ ಮೊದಲ ಗೆಲುವು ಪಡೆದಿದ್ದೇವೆ. ಮುಂದಿನ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ವಿಶ್ವಾಸವಿದೆ. ಮುಂದಿನ ಪಂದ್ಯಗಳ ಗೆಲುವಿಗೆ ದೆಹಲಿ ವಿರುದ್ಧದ ಈ ಜಯ ಸ್ಫೂರ್ತಿ ತುಂಬಿದೆ' ಎಂದು ಕರ್ನಾಟಕ ತಂಡದ ನಾಯಕ ಆರ್. ವಿನಯ್ ಕುಮಾರ್ ಹೇಳಿದ್ದಾರೆ.

`ಈ ಗೆಲುವಿನಲ್ಲಿ ಬೌಲರ್‌ಗಳ ಪಾತ್ರ ಮಹತ್ವದ್ದಾಗಿತ್ತು. ಉತ್ತಮ ಬೌಲಿಂಗ್ ನೆರವಿನಿಂದಲೇ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲಕ್ಕೇರಲು ಸಾಧ್ಯವಾಯಿತು. ಈ ಪಿಚ್ ಆರಂಭದಲ್ಲಿ ಬೌಲರ್‌ಗಳಿಗೆ ನೆರವು ನೀಡಿತು. ಆದರೆ, ಭೋಜನ ವಿರಾಮದ ನಂತರ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ಆರನೇ ವಿಕೆಟ್ ಜೊತೆಯಾಟ ಉತ್ತಮವಾಗಿ ಸಾಗಿದ್ದಾಗ ಡ್ರಾ ಆಗುವ ಆತಂಕ ಮೂಡಿತ್ತು' ಎಂದು ವಿನಯ್ ನುಡಿದರು. ವೇಗಿ ಎಚ್.ಎಸ್. ಶರತ್ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ `ದಾವಣೆಗೆರೆ ಎಕ್ಸ್‌ಪ್ರೆಸ್' `ರಣಜಿಗೆ ಪದಾರ್ಪಣೆ ಮಾಡಿದ ಟೂರ್ನಿಯಲ್ಲಿಯೇ ಶರತ್ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಉತ್ತಮ ಎತ್ತರ ಹೊಂದಿರುವುದರಿಂದ ಅವರು ಅತ್ಯುತ್ತಮ ಲೇನ್ ಹಾಗೂ ಲೆನ್ತ್ ಹಾಕುತ್ತಾರೆ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.