ಬೆಂಗಳೂರು: `ಕೌಶಲಪೂರ್ಣವಾಗಿ ಆಡಿ ಸ್ಥಿರ ಪ್ರದರ್ಶನವನ್ನು ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಇದನ್ನು ರಾಹುಲ್ ದ್ರಾವಿಡ್ ಯಶಸ್ವಿಯಾಗಿ ಮಾಡಿದ್ದಾರೆ. ಇದರಿಂದ ಕ್ರಿಕೆಟ್ನ ಗೌರವವನ್ನೂ ಹೆಚ್ಚಿಸಿದ್ದಾರೆ~ ಎಂದು ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಶ್ಲಾಘಿಸಿದರು.
`ವೆಸ್ಟ್ ಇಂಡೀಸ್, ಇಂಗ್ಲೆಂಡ್ ಪ್ರವಾಸದಲ್ಲಿ ರಾಹುಲ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಆದರೆ, ಆಸ್ಟ್ರೇಲಿಯಾದಲ್ಲಿ ವಿಫಲರಾಗಿದ್ದರು. ಏನೇ ಆಗಲಿ ಕರ್ನಾಟಕದ ಆಟಗಾರ ಇನ್ನೂ ಕೆಲ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇರಬೇಕಿತ್ತು~ ಎಂದು ಅವರು ಅಭಿಪ್ರಾಯ ಪಟ್ಟರು.
ಈ ವಿಷಯವಾಗಿ ದ್ರಾವಿಡ್ ಬಳಿ ಮಾತನಾಡಿದ್ದೆ. ಆದರೆ, `ನಿವೃತ್ತಿ ನಿರ್ಧಾರವನ್ನು ನಾನು ಈಗಾಗಲೇ ತಗೆದುಕೊಂಡಿದ್ದೇನೆ. ಯುವ ಆಟಗಾರರಿಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ನನ್ನ ಬಯಕೆ~ ಎಂದು ಅವರು ಹೇಳಿದ್ದರು ಎನ್ನುವ ವಿಷಯವನ್ನು ವಿಶ್ವನಾಥ್ ತಿಳಿಸಿದರು.
ಕ್ರಿಕೆಟ್ ಜಗತ್ತು ರಾಹುಲ್ ಆವರ ಆಟವನ್ನು `ಮಿಸ್~ ಮಾಡಿಕೊಳ್ಳುತ್ತಿದೆ. ದೀರ್ಘ ಅವಧಿ ದೇಶಕ್ಕಾಗಿ ಆಡಿದ್ದಾರೆ. ಆದರೂ ದೈಹಿಕವಾಗಿ ಫಿಟ್ ಆಗಿದ್ದಾರೆ. ಆಸೀಸ್ನಲ್ಲಿ ಪ್ರಬಲ ಬೌಲರ್ಗಳ ಸವಾಲನ್ನು ಎದುರಿಸಿದ ಕಾರಣ ಅಲ್ಲಿ ವೈಫಲ್ಯ ಅನುಭವಿಸಿದರು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.