ADVERTISEMENT

ಜೂನ್ 9ರಿಂದ ಟಿಟಿ

​ಪ್ರಜಾವಾಣಿ ವಾರ್ತೆ
Published 26 ಮೇ 2018, 19:30 IST
Last Updated 26 ಮೇ 2018, 19:30 IST

ಬೆಂಗಳೂರು: ಕರ್ನಾಟಕ ಟೇಬಲ್ ಟೆನಿಸ್ ಸಂಸ್ಥೆಯ ಸ್ವರ್ಣಮಹೋತ್ಸವ ಸ್ಮಾರಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯು ಜೂನ್ 9ರಿಂದ 12ರವರೆಗೆ ನಡೆಯಲಿದೆ.

ಕೆನರಾ ಯೂನಿಯನ್‌ನಲ್ಲಿ ಟೂರ್ನಿ ಆಯೋಜಿಸಲಾಗಿದೆ. ಮಿನಿ ಕೆಡೆಟ್, ಕೆಡೆಟ್, ಸಬ್‌ ಜೂನಿಯರ್, ಜೂನಿಯರ್, ಯೂತ್ ಬಾಲಕರು ಹಾಗೂ ಬಾಲಕಿಯರು, ಪುರುಷ, ಮಹಿಳೆಯರು ಮತ್ತು ನಾನ್ ಮೆಡಲಿಸ್ಟ್‌ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಜೂನ್‌ 4ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ವಿವರಗಳಿಗೆ ಮುಖ್ಯ ರೆಫರಿ ಜಿ. ಮನೋಹರನ್ (ಮೊಬೈಲ್: 9448808663) ಅವರನ್ನು ಸಂಪರ್ಕಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT