ಜೈಪುರ: ‘ಎ’ ವಲಯದ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಯು ಮುಂಬಾ ತಂಡ ಪ್ರೊ ಕಬಡ್ಡಿ ಪಂದ್ಯದಲ್ಲಿ ಮಂಗಳವಾರ ತಮಿಳ್ ತಲೈವಾಸ್ ವಿರುದ್ಧ ಆಡಲಿದೆ.
ತಲೈವಾಸ್ ತಂಡ ‘ಬಿ’ ವಲಯದ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆಡಿದ 19 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿರುವ ಈ ತಂಡ 13 ಪಂದ್ಯಗಳನ್ನು ಸೋತು ಸಂಕಷ್ಟದಲ್ಲಿದೆ.
ಮುಂಬಾ ತಂಡ ರೈಡಿಂಗ್ ಹಾಗೂ ಟ್ಯಾಕಲ್ ಎರಡೂ ವಿಭಾಗದಲ್ಲಿ ಸಮತೋಲನ ಹೊಂದಿದೆ. ಆದರೆ ಪಂದ್ಯದ ಕೊನೆಯ ವೇಳೆ ಪಾಯಿಂಟ್ಸ್ ಗಳಿಸುವಾಗ ಈ ತಂಡದ ಆಟಗಾರರು ಒತ್ತಡಕ್ಕೆ ಒಳಗಾಗುವ ಕಾರಣ ಹಿಂದಿನ ಕೆಲವು ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಅನೂಪ್ ಕುಮಾರ್ ಸಾರಥ್ಯದ ತಂಡದಲ್ಲಿ ದರ್ಶನ್ ಕಡಿಯಾನ್ ಹಾಗೂ ಕಾಶಿಲಿಂಗ ಅಡಕೆ ಪ್ರಮುಖ ರೈಡರ್ಗಳು ಎನಿಸಿದ್ದಾರೆ.
ದಿನದ ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ದಬಂಗ್ ದೆಹಲಿ ತಂಡಗಳು ಸೆಣಸಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.