ADVERTISEMENT

ನಿಫಾ ಆತಂಕ: ಶೂಟಿಂಗ್‌ ಸ್ಥಳಾಂತರ

ಪಿಟಿಐ
Published 25 ಮೇ 2018, 19:19 IST
Last Updated 25 ಮೇ 2018, 19:19 IST
ನಿಫಾ ಆತಂಕ: ಶೂಟಿಂಗ್‌ ಸ್ಥಳಾಂತರ
ನಿಫಾ ಆತಂಕ: ಶೂಟಿಂಗ್‌ ಸ್ಥಳಾಂತರ   

ನವದೆಹಲಿ: ನಿಫಾ ವೈರಾಣು ಸೋಂಕಿನಿಂದ ತತ್ತರಿಸಿರುವ ಕೇರಳದಿಂದ ಕುಮಾರ್‌ ಸುರೇಂದ್ರ ಸಿಂಗ್ ಸ್ಮಾರಕ ಶೂಟಿಂಗ್ ಚಾಂಪಿಯನ್‌ಷಿಪ್ ಸ್ಥಳಾಂತರಿಸಲು ರಾಷ್ಟ್ರೀಯ ಶೂಟಿಂಗ್ ಫೆಡರೇಷನ್ ನಿರ್ಧರಿಸಿದೆ.

ರೈಫಲ್‌ ಮತ್ತು ಪಿಸ್ತೂಲ್ ವಿಭಾಗದ 18ನೇ ಚಾಂಪಿಯನ್‌ಷಿಪ್ ಕೇರಳ ರಾಜಧಾನಿ ತಿರುವನಂತಪುರದಲ್ಲಿ ಇದೇ ತಿಂಗಳ 31ರಿಂದ ಜೂನ್‌ 18 ವರೆಗೆ ಆಯೋಜಿಸಲು ನಿರ್ಧರಿಸಲಾಗಿತ್ತು. ಶುಕ್ರವಾರ ನಿರ್ಧಾರ ಬದಲಿಸಿರುವ ಫೆಡರೇಷನ್‌ ಜೂನ್‌ 10ರಿಂದ ದೆಹಲಿಯ ಡಾ.ಕರ್ಣಿಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ನಡೆಸಲು ಉದ್ದೇಶಿಸಿದೆ.

ಜೂನ್‌ ಏಳರಿಂದ 17ರ ವರೆಗೆ ಸೀನಿಯರ್, ಜೂನಿಯರ್ ಮತ್ತು ಯೂತ್ ವಿಭಾಗದ ರಾಷ್ಟ್ರೀಯ ಆಯ್ಕೆ ಶಿಬಿರ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.