ಬೆಂಗಳೂರು: ಉತ್ತಮ ಆಟ ಆಡಿದ ಎಂಎಸ್ಎಸ್ಟಿಟಿಎ ಕ್ಲಬ್ನ ಎ.ನಿಹಾರಿಕಾ ಮತ್ತು ಎಸ್ಬಿಟಿಟಿಎ ಕ್ಲಬ್ನ ವರುಣ್ ಬಿ.ಕಶ್ಯಪ್ ಅವರು ಕೆನರಾ ಯೂನಿಯನ್ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಕೆಡೆಟ್ ಬಾಲಕಿಯರ ಮತ್ತು ಬಾಲಕರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಮಲ್ಲೇಶ್ವರಮ್ನ ಪ್ರಕಾಶ್ ಕೋರ್ಟ್ಸ್ನಲ್ಲಿ ಶನಿವಾರ ನಡೆದ ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ನಿಹಾರಿಕಾ 11–3, 9–11, 16–14, 11–3ರಲ್ಲಿ ಫರ್ಹಾ ತಹಸೀನಾ ಅವರನ್ನು ಸೋಲಿಸಿದರು.
ಸೆಮಿಫೈನಲ್ ಹೋರಾಟಗಳಲ್ಲಿ ನಿಹಾರಿಕಾ 11–4, 11–6, 11–1ರಲ್ಲಿ ಸಂಸ್ಕೃತ ಎದುರೂ, ತಹಸೀನಾ 11–5, 11–5, 11–3ರಲ್ಲಿ ಎಂ.ಸಾನ್ವಿ ವಿರುದ್ಧವೂ ಗೆದ್ದಿದ್ದರು.
ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ವರುಣ್ 11–7, 11–9, 13–11ರ ನೇರ ಗೇಮ್ಗಳಿಂದ ಎಸ್ಬಿಟಿಟಿಎ ಕ್ಲಬ್ನ ಅಭಿನವ್ ಕೆ.ಮೂರ್ತಿ ವಿರುದ್ಧ ವಿಜಯಿಯಾದರು.
ಶೇಷನಾಥ್ಗೆ ಪ್ರಶಸ್ತಿ: ಮಿನಿ ಕೆಡೆಟ್ ಬಾಲಕರ ವಿಭಾಗದಲ್ಲಿ ಶೇಷನಾಥ್ ರಾಮಸ್ವಾಮಿ ಚಾಂಪಿಯನ್ ಆದರು.
ಫೈನಲ್ನಲ್ಲಿ ಶೇಷನಾಥ್ 11–6, 12–10, 13–11ರಲ್ಲಿ ಅಭಿನವ್ ಪ್ರಸಾದ್ ಅವರನ್ನು ಮಣಿಸಿದರು.
ಸಾನ್ವಿಗೆ ಗರಿ: ಮಿನಿ ಕೆಡೆಟ್ ಬಾಲಕಿಯರ ವಿಭಾಗದಲ್ಲಿ ಎಂ.ಸಾನ್ವಿ, ಕಿರೀಟ ಮುಡಿಗೇರಿಸಿಕೊಂಡರು.
ಫೈನಲ್ನಲ್ಲಿ ಸಾನ್ವಿ 11–6, 11–4, 11–7ರಲ್ಲಿ ವೃಶಾಲಿ ಕಿಣಿ ಅವರನ್ನು ಸೋಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.