ಕಟಕ್: ಕರ್ನಾಟಕ ಬಾಲಕರ ತಂಡದವರು ಇಲ್ಲಿ ನಡೆಯುತ್ತಿರುವ 64ನೇ ರಾಷ್ಟ್ರೀಯ ಜೂನಿಯರ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಗುರುವಾರದ ಪಂದ್ಯದಲ್ಲಿ 21–92 ಪಾಯಿಂಟ್ಗಳಿಂದ ತಮಿಳುನಾಡು ಎದುರು ನಿರಾಸೆ ಕಂಡಿತು.
ಕರ್ನಾಟಕದ ಕ್ಲಿಂಟನ್ (21 ಪಾಯಿಂಟ್), ಜಿತೇಂದರ್ (15), ಎಂ. ಶರತ್ (10) ಪಾಯಿಂಟ್ ಕಲೆ ಹಾಕಿ ಗಮನ ಸೆಳೆದರು.
ಬಾಲಕರ ವಿಭಾಗದಲ್ಲಿ ಹರಿಯಾಣ, 89–68ರಲ್ಲಿ ಉತ್ತರ ಪ್ರದೇಶ ಮೇಲೂ, ಒಡಿಶಾ 102–97ರಲ್ಲಿ ಪಶ್ಚಿಮ ಬಂಗಾಳ ವಿರುದ್ಧವೂ, ಬಾಲಕಿಯರ ವಿಭಾಗದಲ್ಲಿ ರಾಜಸ್ತಾನ 71–44ರಲ್ಲಿ ಚಂಡೀಗಡದ ಮೇಲೂ ಗೆಲುವು ಸಾಧಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.