
ಪ್ರಜಾವಾಣಿ ವಾರ್ತೆಮುಂಬೈ (ಪಿಟಿಐ): `ಯಾರಿಗೂ ಮೋಸ ಮಾಡಿಲ್ಲ. ಅಖ್ತರ್ ಹೇಳಿಕೊಂಡಿರುವ ವಿಷಯದ ಬಗ್ಗೆ ನನಗಂತೂ ಗೊತ್ತಿಲ್ಲ~ ಎಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮಾಲೀಕ ಶಾರೂಖ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಶೋಯಬ್ ಅಖ್ತರ್ ತಮ್ಮ ಆತ್ಮಚರಿತ್ರೆ `ಕಾಂಟ್ರೊವರ್ಸಿಯಲಿ ಯುವರ್ಸ್~ ಪುಸ್ತಕದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ತಂಡವಾದ ನೈಟ್ ರೈಡರ್ಸ್ ಸೇರಿದ್ದಾಗ ತಮಗೆ ಸಲ್ಲಬೇಕಾದ ಮೊತ್ತವನ್ನು ನೀಡದಿರುವ ಮೂಲಕ ಮೋಸ ಮಾಡಲಾಯಿತೆಂದು ಉಲ್ಲೇಖಿಸಿದ್ದಾರೆ. ಆದರೆ ಈ ಬಗ್ಗೆ ತಮಗೆ ಏನೂ ತಿಳಿದಿಲ್ಲವೆಂದು ಶಾರೂಕ್ ಹೇಳಿದರು.
`ಐಪಿಎಲ್ ಮುಖ್ಯಸ್ತರಾಗಿದ್ದ ಲಲಿತ್ ಮೋದಿ ಹಾಗೂ ಶಾರೂಖ್ ಸೇರಿ ನೈಟ್ ರೈಡರ್ಸ್ ಸೇರುವಂತೆ ಮನವೊಲಿಸಿದ್ದರು. ಅವರು ಮಾತು ನಂಬಬಾರದಿತ್ತು. ನಂಬಿ ಮೋಸಹೋದೆ. ನನಗೆ ನೀಡುವುದಾಗಿ ಒಪ್ಪಿಕೊಂಡಿದ್ದ ಮೊತ್ತವನ್ನು ಅವರು ಕೊಡಲೇ ಇಲ್ಲ~ ಎಂದು ಅಖ್ತರ್ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.