ಮೆಲ್ಬರ್ನ್: ನಾಲ್ಕು ರನೌಟ್ಗಳು ಮತ್ತು ಎದುರಾಳಿ ತಂಡದ ಎರಡು ವಿಕೆಟ್ಗಳನ್ನು ಬೇಗನೇ ಪಡೆಯಲು ಸಾಧ್ಯವಾದದ್ದು ಭಾರತ ತಂಡದ ಗೆಲುವಿಗೆ ಕಾರಣ ಎಂದು ರವೀಂದ್ರ ಜಡೇಜ ಅಭಿಪ್ರಾಯಪಟ್ಟಿದ್ದಾರೆ.
`ಮೊದಲೇ ಎರಡು ವಿಕೆಟ್ಗಳು ದೊರೆತ ಕಾರಣ ನಮಗೆ ಎದುರಾಳಿಗಳ ಮೇಲೆ ಒತ್ತಡ ಹೇರಲು ಸಾಧ್ಯವಾಯಿತು. ಜೊತೆಗೆ ಆ್ಯರನ್ ಫಿಂಚ್ ಹಾಗೂ ಜಾರ್ಜ್ ಬೈಲಿ ಅವರನ್ನು ರನೌಟ್ ಮಾಡುವಲ್ಲಿ ಯಶಸ್ವಿಯಾದೆವು. ಇದರಿಂದ ಆಸೀಸ್ ಆರಂಭದಲ್ಲೇ ಹಿನ್ನಡೆ ಅನುಭವಿಸಿತು~ ಎಂದು ಪಂದ್ಯದ ಬಳಿಕ ನುಡಿದರು.
ಆಲ್ರೌಂಡರ್ ಜಡೇಜ ಮೂರು ಓವರ್ಗಳಲ್ಲಿ ಕೇವಲ 16 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದಿದ್ದರು. ಮಾತ್ರವಲ್ಲ ಫಿಂಚ್ ಹಾಗೂ ಬೈಲಿ ಅವರನ್ನು ರನೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.