ADVERTISEMENT

ವಿನಯ್ ಹ್ಯಾಟ್ರಿಕ್: ತತ್ತರಿಸಿದ ಮುಂಬೈ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 9:54 IST
Last Updated 7 ಡಿಸೆಂಬರ್ 2017, 9:54 IST
ವಿನಯ್ ಹ್ಯಾಟ್ರಿಕ್: ತತ್ತರಿಸಿದ ಮುಂಬೈ
ವಿನಯ್ ಹ್ಯಾಟ್ರಿಕ್: ತತ್ತರಿಸಿದ ಮುಂಬೈ   

ನಾಗಪುರ: ಕರ್ನಾಟಕ ತಂಡದ ನಾಯಕ ಆರ್. ವಿನಯಕುಮಾರ್ (6 ವಿಕೆಟ್‌) ಗುರುವಾರ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಆರಂಭವಾದ ರಣಜಿ ಟೂರ್ನಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡದ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದರು.

ಕರ್ನಾಟಕ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿನಯ್ ಮೊದಲ ಓವರ್ ನ ಕೊನೆಯ ಎಸೆತದಲ್ಲಿ ಪೃಥ್ವಿ ಷಾ ವಿಕೆಟ್ ಕಬಳಿಸಿದರು. ತಮ್ಮ ಎರಡನೇ ಓವರ್ ನ ಮೊದಲ ಎಸೆತದಲ್ಲಿ ಜೈ ಗೋಕುಲ್ ಬಿಷ್ಠ ಮತ್ತು ನಂತರದ ಎಸೆತದಲ್ಲಿ ಆಕಾಶ್ ಪಾರ್ಕರ್ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. 

ಇನಿಂಗ್ಸ್ ನ ಒಂಬತ್ತನೇ ಓವರ್ ನಲ್ಲಿ ವಿನಯ್ ಅವರು ಸಿದ್ಧೇಶ್ ಲಾಡ್ ವಿಕೆಟ್ ಕಬಳಿಸಿದರು. ಎಡಗೈ ಮಧ್ಯಮವೇಗಿ ಎಸ್. ಅರವಿಂದ್, ಅಭಿಮನ್ಯು ಮಿಥುನ್ ಮತ್ತು ಸ್ಪಿನ್ಲರ್ ಕೆ. ಗೌತಮ್ ತಲಾ ಒಂದು ವಿಕೆಟ್ ಪಡೆದರು. ಇದರಿಂದಾಗಿ ಮುಂಬೈ ತಂಡವು ಊಟದ ವಿರಾಮಕ್ಕೆ 30 ಓವರ್ ಗಳಲ್ಲಿ 7 ವಿಕೆಟ್ ಗಳಿಗೆ 90 ರನ್ ಗಳಿಸಿತು. 

ADVERTISEMENT

ಮುಂಬೈ ಮೊದಲ ಇನಿಂಗ್ಸ್‌ 56 ಓವರ್‌ಗಳಲ್ಲಿ 173 ರನ್‌ ಗಳಿಸಿ ಆಲೌಟ್‌ ಆಗಿದೆ. 

ಸದ್ಯ ಮೊದಲ ಇನಿಂಗ್ಸ್‌ ಆರಂಭಿಸಿರುವ ಕರ್ನಾಟಕ 14 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 67 ರನ್‌ ಗಳಿಸಿದೆ. (ರವಿಕುಮಾರ್‌ ಸಮರ್ಥ್‌ ಬ್ಯಾಟಿಂಗ್‌ 36, ಮಯಂಕ್‌ ಆಗರ್‌ವಾಲ್‌ ಬ್ಯಾಟಿಂಗ್‌ 30)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.