ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶನಿವಾರದಿಂದ ನಡೆಯುವ ವಿನೂ ಮಂಕಡ್ ಟ್ರೋಫಿ 19 ವರ್ಷದೊಳಗಿನವರ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಗೆ ರಾಜ್ಯ ತಂಡವನ್ನು ಪ್ರಕಟಿಸಿದೆ.
ಟೂರ್ನಿಯ ಪಂದ್ಯಗಳು ಅಕ್ಟೋ ಬರ್ 14ರವರೆಗೆ ಆಲೂರಿನ ಕ್ರೀಡಾಂಗಣಗಳಲ್ಲಿ ಜರುಗಲಿವೆ. ಜವಾಹರ ಸ್ಪೋರ್ಟ್ಸ್ ಕ್ಲಬ್ನ ನಿಕಿನ್ ಜೋಶ್ ಅವರು ಕರ್ನಾಟಕ ತಂಡದ ಸಾರಥ್ಯ ವಹಿಸಲಿದ್ದಾರೆ.
ತಂಡ ಇಂತಿದೆ: ನಿಕಿನ್ ಜೋಸ್ (ನಾಯಕ), ದೇವದತ್ತ ಪಡಿಕಲ್ (ಉಪ ನಾಯಕ), ಬಿ.ಎ.ಮೋಹಿತ್, ಲವನಿತ್ ಸಿಸೋಡಿಯಾ, ಶುಭಾಂಗ್ ಹೆಗ್ಡೆ, ಗೌತಮ್ ಸಾಗರ್, ಮನೋಜ್ ಭಂಡಾಗೆ, ಸುಜಯ್ ಸತೇರಿ (ವಿಕೆಟ್ ಕೀಪರ್), ಎಂ.ಹಿಮಾದ್ರಿ, ಬಿ.ಎಂ.ಶ್ರೇಯಸ್, ರುಚಿರ್ ಜೋಶಿ, ಅಮನ್ ಖಾನ್, ವಿದ್ವತ್ ಕಾವೇರಪ್ಪ, ರೋಹಿತ್ ಸಾಯಿ ರಾಮ್ ಮತ್ತು ಬಿ.ಧೀಮಂತ್.
ಕೋಚ್: ಯರೇಗೌಡ. ಸಹಾಯಕ ಕೋಚ್: ವಿಜಯ್ ಮದ್ಯಾಲ್ಕರ್. ಮ್ಯಾನೇಜರ್: ಅನುತೋಷ್ ಪಾಲ್. ಫಿಸಿಯೊ: ಟಿ.ಮಂಜುನಾಥ್. ವಿಡಿಯೊ ವಿಶ್ಲೇಷಕ: ಪಿ.ರಾಜೀವ್. ಟ್ರೈನರ್: ಎ.ಕಿರಣ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.