ಕೊಲಂಬೊ: ಶ್ರೀಲಂಕಾದ ಗಾಯಗೊಂಡಿರುವ ಆರಂಭಿಕ ಬ್ಯಾಟ್ಸ್ಮನ್ ದಿಮುತ್ ಕರುಣರತ್ನೆ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪ್ರಕಟಿಸಿರುವ ತಂಡದಿಂದ ಕೈಬಿಡಲಾಗಿದೆ. ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಗೆ 17 ಸದಸ್ಯರ ತಂಡವನ್ನು ಶುಕ್ರವಾರ ಆಯ್ಕೆ ಮಾಡಿದೆ.
ತಂಡ: ದಿನೇಶ್ ಚಾಂದಿಮಲ್ (ನಾಯಕ), ಮಾಹೇಲ ಉದವಟೆ, ಕುಶಾಲ್ ಮೆಂಡಿಸ್, ಕುಶಾಲ್ ಪೆರೇರ, ಧನಂಜಯ ಡಿ ಸಿಲ್ವಾ, ರೋಷನ್ ಸಿಲ್ವಾ, ಆ್ಯಂಜೆಲೊ ಮ್ಯಾಥ್ಯೂಸ್, ನಿರೋಷನ್ ಡಿಕ್ವೆಲ್ಲಾ, ರಂಗನಾ ಹೆರಾತ್, ದಿಲ್ರುವಾನ್ ಪೆರೇರ, ಅಖಿಲ ಧನಂಜಯ, ಜೆಫ್ರಿ ವಂಡರ್ಸೆ, ಲಾಹಿರು ಗಮಗೆ, ಕಸೂನ್ ರಂಜಿತಾ, ಸುರಂಗ ಲಕ್ಮಲ್, ಲಾಹಿರು ಕುಮಾರ, ಅಸಿತಾ ಫರ್ನಾಂಡೊ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.