ಬೆಂಗಳೂರು: ನಿಷೇಧದಿಂದ ಮುಕ್ತರಾಗಿರುವ ಸಂದೀಪ್ ಸಿಂಗ್ ಹಾಗೂ ಸರ್ದಾರ್ ಸಿಂಗ್ ಅವರು ಶುಕ್ರವಾರ ಇಲ್ಲಿನ ಭಾರತ ಕ್ರೀಡಾ ಪ್ರಾಧಿಕಾರ (ಎಸ್ಎಐ)ದಲ್ಲಿ ನಡೆಯುತ್ತಿರುವ ಭಾರತ ಹಾಕಿ ತಂಡದ ಶಿಬಿರ ಸೇರಿಕೊಂಡಿದ್ದಾರೆ.
`ಮತ್ತೆ ತಂಡ ಸೇರಲು ನಮಗೆ ಖುಷಿಯಾಗುತ್ತಿದೆ. ಮನೆಯಲ್ಲಿ ಸಮಸ್ಯೆ ಇದ್ದ ಕಾರಣ ನಾವು ಶಿಬಿರ ತೊರೆದಿದ್ದೆವು. ಈಗ ಸಮಸ್ಯೆ ಬಗೆ ಹರಿದಿದೆ. ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ನಾವು ಜಯ ಗಳಿಸಬೇಕು~ ಎಂದು ಅವರು ತಿಳಿಸಿದರು.
ಚೀನಾದ ಓರ್ಡೋಸ್ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆದ ತಂಡದ 18 ಮಂದಿ ಆಟಗಾರರು ನವದೆಹಲಿಗೆ ತೆರಳಲಿದ್ದಾರೆ. ಭಾನುವಾರ ಮಧ್ಯಾಹ್ನ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಆ ಸಂದರ್ಭದಲ್ಲಿ ಆಟಗಾರರಿಗೆ ಕೇಂದ್ರ ಸರ್ಕಾರ ತಲಾ 1.5 ಲಕ್ಷ ಹಣ ನೀಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.