ಬೆಂಗಳೂರು: ಶ್ರೀರಾಮ್ ಸರ್ಜಾ ಬೆಂಗಳೂರು ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಬ್ಲಿಟ್ಜ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ನೃಪತುಂಗ ರಸ್ತೆಯಲ್ಲಿರುವ ಯುವ ಕೇಂದ್ರದಲ್ಲಿ ನಡೆದ ಸ್ಪರ್ಧೆಯಲ್ಲಿ ಶ್ರೀರಾಮ್ 9.5 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನ ಪಡೆದರು. ಇದು ಒಟ್ಟು 11 ಸುತ್ತಿನ ಸ್ಪರ್ಧೆಯಾಗಿತ್ತು. ಬೆಂಗಳೂರಿನ ಎಸ್. ರಾಹುಲ್ (ಎರಡನೆ), ಎ. ಬಾಲಕಿಶನ್ (ಮೂರನೆ) ಹಾಗೂ ಅರ್ಜುನ್ ಭರತ್ (ನಾಲ್ಕನೇ) ಸ್ಥಾನ ಗಳಿಸಿದರು. ಮೂವರು ಆಟಗಾರರು ತಲಾ ಒಂಬತ್ತು ಪಾಯಿಂಟ್ ಕಲೆ ಹಾಕಿದ್ದರು. ಟೈ ಬ್ರೇಕ್ನಲ್ಲಿ ಗಳಿಸಿದ ಪಾಯಿಂಟ್ಗಳ ಆಧಾರದ ಮೇಲೆ ಸ್ಥಾನಗಳನ್ನು ನಿರ್ಧರಿಸಲಾಯಿತು.
ಎನ್. ಸಂಜಯ್ (8.5), ವೈ.ಜಿ. ವಿಜೇಂದ್ರ (8.5), ಆದಿತ್ಯ ಚಕ್ರವರ್ತಿ (8.5), ಗೋಸ್ವಾಮಿ ವೇದಾಂತ್, ವಿ.ಪಿ.ಎಸ್. ದರ್ಶನ್ ಹಾಗೂ ಕೆ.ಎಸ್. ರಘುನಂದನ (ಮೂವರು ಆಟಗಾರರು ತಲಾ 8 ಪಾಯಿಂಟ್) ಪಡೆದು ನಂತರದ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.