ಹುಬ್ಬಳ್ಳಿ: `ನಮ್ಮ ಬೌಲಿಂಗ್ ಚೆನ್ನಾಗಿಯೇ ಇತ್ತು. ಅವರನ್ನು(ಹರಿಯಾಣ) 220 ರನ್ ಮೊತ್ತದೊಳಗೆ ಕಟ್ಟಿಹಾಕುವ ನಮ್ಮ ಪ್ರಯತ್ನ ಮಾತ್ರ ಈಡೇರಲಿಲ್ಲ ಎಂದು ಕರ್ನಾಟಕ ತಂಡದ ನಾಯಕ ಸ್ಟುವರ್ಟ್ ಬಿನ್ನಿ ನಿರಾಸೆ ವ್ಯಕ್ತಪಡಿಸಿದರು.
`ಮೊದಲ ಎರಡು ಅವಧಿಯಲ್ಲಿ ನಾವೇ ಮುಂಚೂಣಿಯಲ್ಲಿದ್ದೇವು. ಆದರೆ ಕೊನೆಯ ಅವಧಿಯಲ್ಲಿ ಅಮಿತ್ಮಿಶ್ರಾ ಮತ್ತು ಜಯಂತ್ ಯಾದವ್ ತೋರಿದ ಪ್ರದರ್ಶನದಿಂದ ನಮ್ಮ ಯೋಜನೆ ಸಫಲವಾಗಲಿಲ್ಲ. ಭಾನುವಾರ ಬೆಳಿಗ್ಗೆಯ ಮೊದಲ ಅವಧಿಯಲ್ಲಿ ವಿಕೆಟ್ ಪಡೆದು ನಾವು ಬ್ಯಾಟಿಂಗ್ ಆರಂಭಿಸುವುದೇ ನಮ್ಮ ಗುರಿ' ಎಂದು ಹೇಳಿದರು.
`ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಬೆಂಬಲ ನೀಡುವ ಪಿಚ್ ಇದು. ಬೌನ್ಸ್ರ್ಗಳ ಮೂಲಕವೇ ನಮ್ಮನ್ನು ವಿಚಲಿತಗೊಳಿಸುವ ಯೋಜನೆ ಕರ್ನಾಟಕ ಬೌಲರ್ಗಳದ್ದಾಗಿತ್ತು. ಆದರೆ ನಾವು ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂದು ಹರಿಯಾಣ ನಾಯಕ ಅಮಿತ್ ಮಿಶ್ರಾ ಹೆಮ್ಮೆ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.