ADVERTISEMENT

ಜೂನಿಯರ್‌ ತಂಡಕ್ಕೆ ರಾಹುಲ್‌ ನಾಯಕ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST

ಬೆಂಗಳೂರು: ಸೋಷಿಯಲ್‌ ಕ್ರಿಕೆಟರ್ಸ್‌ ಕ್ಲಬ್‌ನ ರಾಹುಲ್‌ ಪ್ರಸನ್ನ, ದಕ್ಷಿಣ ವಲಯ 14 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಶುಕ್ರವಾರ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಟೂರ್ನಿ ಜನವರಿ 7ರಿಂದ 21ರವರೆಗೆ ಕೇರಳದಲ್ಲಿ ನಡೆಯಲಿದೆ.

ತಂಡ ಇಂತಿದೆ: ರಾಹುಲ್‌ ಪ್ರಸನ್ನ (ನಾಯಕ), ತಿಪ್ಪಾರೆಡ್ಡಿ (ಉಪ ನಾಯಕ), ಪಿ.ಯಶೋವರ್ಧನ್‌, ಆಯುಷ್‌ಕುಮಾರ್‌ ಬಾರಿಕ್‌, ಪ್ರಿಯಾಲ್‌ ಸಿಂಗ್‌, ಬಿ.ಎಸ್‌.ಯೋಗೇಶ್‌, ವಿಶಾಲ್‌ ಕುಮಾರ್‌, ಎಸ್‌.ಎಚ್‌.ಸ್ವರೂಪ್‌, ವಿ.ಪೃಥ್ವಿ, ಅರ್ಜುನ್‌ ನಾಯರ್‌, ಯು.ಕರಣ್‌ (ವಿಕೆಟ್‌ ಕೀಪರ್‌), ಅನಿರುದ್ಧ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌), ಎಸ್‌.ಅಶ್ವಿನ್‌, ಆರ್‌.ಸುಹಾಸ್‌, ಹೃಶಿತ್‌ ಶೆಟ್ಟಿ ಮತ್ತು ವಿಜಯ್‌ ರಾಜ್‌.

ADVERTISEMENT

ಕೋಚ್‌ಗಳು: ರಾಜಶೇಖರ್‌ ಶಾನಬಾಳ್‌ ಮತ್ತು ನಿಧುವನ್‌. ಫಿಸಿಯೊ: ಶ್ರೀರಂಗ. ಟ್ರೈನರ್‌: ಪ್ರದೀಪ್‌. ಮ್ಯಾನೇಜರ್‌: ಅಶೋಕ್‌ ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.