ದುಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಅಂಧರ ಐದನೇ ಏಕದಿನ ವಿಶ್ವಕಪ್ನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಿತು. ಈ ತಂಡ 3 ಓವರ್ಗಳಲ್ಲಿ 2ವಿಕೆಟ್ಗೆ 26ರನ್ ಗಳಿಸಿದ್ದ ವೇಳೆ ಮಳೆ ಸುರಿಯಿತು. ವರುಣನ ಆಟ ನಿಲ್ಲದ ಕಾರಣ ಪಂದ್ಯ ರದ್ದು ಮಾಡಿ ಉಭಯ ತಂಡಗಳಿಗೂ ತಲಾ ಒಂದು ಪಾಯಿಂಟ್ ನೀಡಲಾಯಿತು.
ಮೊದಲ ಓವರ್ನಲ್ಲಿ ಆಸ್ಟ್ರೇಲಿಯಾ ತಂಡದ ಪ್ರಿಟ್ಚಾರ್ಡ್ ಅವರನ್ನು ಭಾರತದ ದೀಪಕ್ ಮಲಿಕ್ ರನ್ಔಟ್ ಮಾಡಿದರು. ಇದರ ಬೆನ್ನಲ್ಲೇ ಸ್ಟೆಫಾನ್ ನೆರೊ, ಗಣೇಶ್ ಮುಂಡ್ಕರ್ಗೆ ಕ್ಯಾಚ್ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.