ADVERTISEMENT

ಅಜಯ್‌ ರೆಡ್ಡಿ ಶತಕ ಮಿಂಚು

ಅಂಧರ ವಿಶ್ವಕಪ್‌ ಕ್ರಿಕೆಟ್‌: ಭಾರತಕ್ಕೆ ಜಯ

ಪಿಟಿಐ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST
ಟಾಸ್‌ ಗೆದ್ದುಕೊಂಡ ಬಾಂಗ್ಲಾದೇಶ ತಂಡದ ನಾಯಕನಿಗೆ ಅಭಿನಂದಿಸಿದ ಭಾರತ ತಂಡದ ನಾಯಕ ಅಜಯ್ ರೆಡ್ಡಿ
ಟಾಸ್‌ ಗೆದ್ದುಕೊಂಡ ಬಾಂಗ್ಲಾದೇಶ ತಂಡದ ನಾಯಕನಿಗೆ ಅಭಿನಂದಿಸಿದ ಭಾರತ ತಂಡದ ನಾಯಕ ಅಜಯ್ ರೆಡ್ಡಿ   

ದುಬೈ (ಪಿಟಿಐ): ನಾಯಕ ಅಜಯ್ ಕುಮಾರ್ ರೆಡ್ಡಿ ಅವರ ಆಲ್‌ರೌಂಡ್ ಆಟದ ನೆರವಿನಿಂದ ಭಾರತ ತಂಡ ಐದನೇ ಅಂಧರ ವಿಶ್ವಕಪ್‌ ಕ್ರಿಕೆಟ್ ಪಂದ್ಯದಲ್ಲಿ ಶನಿವಾರ ಬಾಂಗ್ಲಾದೇಶ ತಂಡದ ಎದುರು 10 ವಿಕೆಟ್‌ಗಳಿಂದ ಗೆದ್ದಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡ 40 ಓವರ್‌ಗಳಲ್ಲಿ 8 ವಿಕೆಟ್‌ಗೆ 226 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 18.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿತು.

ಆಂಧ್ರಪ್ರದೇಶದ ಅಜಯ್  60 ಎಸೆತಗಳಲ್ಲಿ 101 ರನ್‌ ದಾಖಲಿಸಿ ಮಿಂಚಿದರು. 14 ಬೌಂಡರಿಗಳನ್ನು ಸಿಡಿಸಿದರು. ಕರ್ನಾಟಕದ ಸುನಿಲ್ ರಮೇಶ್‌ (105, 57ಎ) 17 ಬೌಂಡರಿಗಳನ್ನು ಬಾರಿಸಿದರು.

ADVERTISEMENT

ಅಜಯ್ ರೆಡ್ಡಿ ಎದುರಾಳಿ ತಂಡದ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಜಯದ ರೂವಾರಿ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.