ADVERTISEMENT

ಅಂಧರ ಕ್ರಿಕೆಟ್‌ಗೆ ಮಾನ್ಯತೆ ನೀಡಲು ಸಚಿನ್ ಮನವಿ

ಪಿಟಿಐ
Published 7 ಫೆಬ್ರುವರಿ 2018, 20:02 IST
Last Updated 7 ಫೆಬ್ರುವರಿ 2018, 20:02 IST
ಅಂಧರ ಕ್ರಿಕೆಟ್‌ಗೆ ಮಾನ್ಯತೆ ನೀಡಲು ಸಚಿನ್ ಮನವಿ
ಅಂಧರ ಕ್ರಿಕೆಟ್‌ಗೆ ಮಾನ್ಯತೆ ನೀಡಲು ಸಚಿನ್ ಮನವಿ   

ನವದೆಹಲಿ: ಅಂಧರ ಕ್ರಿಕೆಟ್‌ಗೆ ಮಾನ್ಯತೆ ನೀಡಿ ಆಟಗಾರರನ್ನು ಪಿಂಚಣಿ ಯೋಜನೆಯಡಿ ಸೇರಿಸಬೇಕು ಎಂದು ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಕೋರಿದ್ದಾರೆ.

ಈ ಕುರಿತು ಆಡಳಿತಾಧಿಕಾರಿಗಳ ಸಮಿತಿ (ಸಿಎಒ) ಅಧ್ಯಕ್ಷ ವಿನೋದ್ ರಾಯ್‌ಗೆ ಪತ್ರ ಬರೆದಿರುವ ಅವರು ‘ಅಂಧ ಕ್ರಿಕೆಟಿಗರ ತಂಡದವರು ನಾಲ್ಕನೇ ಬಾರಿ ವಿಶ್ವಕಪ್‌ ಗೆದ್ದಿದ್ದಾರೆ. ಆದರೂ ಅವರಿಗೆ ಮಾನ್ಯತೆ ಸಿಗಲಿಲ್ಲ’ ಎಂದು ಹೇಳಿದ್ದಾರೆ. ಜನವರಿ 20ರಂದು ನಡೆದ ಅಂಧರ ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ತಂಡದ ಪ್ರಶಸ್ತಿ ಗೆದ್ದಿತ್ತು.

‘ಅಂಧ ಆಟಗಾರರು ಕ್ರೀಡಾಂಗಣದಲ್ಲಿ ತೋರುವ ಸಾಮರ್ಥ್ಯ ಇತರರಿಗೆ ಮಾದರಿ. ಭಾರತ ತಂಡದವರು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಆಟದ ಮೇಲೆ ಗಮನವಿರಿಸಿ ಕಪ್ ಗೆದ್ದಿದ್ದಾರೆ. ಆ ಮೂಲಕ ದೇಶಕ್ಕೆ ಗೌರವ ತಂದಿದ್ದಾರೆ. ಅವರ ಗೆಲುವು ಮನುಷ್ಯನ ಮನಸ್ಸಿನ ಆಳ ಮತ್ತು ಅಗಲವನ್ನು ಜಗತ್ತಿಗೆ ಪರಿಚಯಿಸಿದೆ’ ಎಂದು ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.