ADVERTISEMENT

ಮಿಂಚಿದ ಪ್ರಕಾಶ್, ಸುನಿಲ್

ಅಂಧರ ಕ್ರಿಕೆಟ್‌: ಕರ್ನಾಟಕಕ್ಕೆ ಎರಡನೇ ಜಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 19:41 IST
Last Updated 26 ನವೆಂಬರ್ 2019, 19:41 IST
ಎದುರಾಳಿ ತಂಡದ ವಿಕೆಟ್‌ ಬಿದ್ದಾಗ ಕರ್ನಾಟಕದ ಆಟಗಾರರು ಸಂಭ್ರಮಿಸಿದರು
ಎದುರಾಳಿ ತಂಡದ ವಿಕೆಟ್‌ ಬಿದ್ದಾಗ ಕರ್ನಾಟಕದ ಆಟಗಾರರು ಸಂಭ್ರಮಿಸಿದರು   

ಮೈಸೂರು: ಪ್ರಕಾಶ್‌ ಜಯರಾಮಯ್ಯ ಮತ್ತು ಸುನಿಲ್‌ ಅವರ ಭರ್ಜರಿ ಆಟದ ಬಲದಿಂದ ಕರ್ನಾಟಕ ತಂಡ ಇಂಡಸ್‌ಇಂಡ್‌ ಬ್ಯಾಂಕ್‌ ನಾಗೇಶ್‌ ಟ್ರೋಫಿ ಅಂಧರ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿತು.

ಎಸ್‌ಜೆಸಿಇ ಮೈದಾನದಲ್ಲಿ ಮಂಗಳ ವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡ 63 ರನ್‌ಗಳಿಂದ ದೆಹಲಿ ತಂಡ ವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ತಂಡ ಪ್ರಕಾಶ್‌ (79, 43 ಎಸೆತ) ಮತ್ತು ಸುನಿಲ್ (71; 32 ಎಸೆತ) ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 217 ರನ್‌ ಗಳಿಸಿತು. ಎದುರಾಳಿ ತಂಡ 19.4 ಓವರ್‌ಗಳಲ್ಲಿ 154 ರನ್‌ಗಳಿಗೆ ಆಲೌಟಾಯಿತು.

ADVERTISEMENT

ಸಂಕ್ಷಿಪ್ತ ಸ್ಕೋರ್: ಕರ್ನಾಟಕ 20 ಓವರ್‌ಗಳಲ್ಲಿ 5ಕ್ಕೆ 217 (ಪ್ರಕಾಶ್ 79, ಸುನಿಲ್ 71, ನೀಲೇಶ್ 51ಕ್ಕೆ 2) ದೆಹಲಿ 19.4 ಓವರ್‌ಗಳಲ್ಲಿ 154 (ಸೌರವ್‌ ಪಾಂಡೆ 38, ಪಿಂಟು 21, ಅಭಿ 10ಕ್ಕೆ 2) ಫಲಿತಾಂಶ: ಕರ್ನಾಟಕಕ್ಕೆ 63 ರನ್‌ ಗೆಲುವು; ಪಂದ್ಯಶ್ರೇಷ್ಠ: ಪ್ರಕಾಶ್ ಜಯರಾಮಯ್ಯ

ಗೋವಾ: 20 ಓವರ್‌ಗಳಲ್ಲಿ 6ಕ್ಕೆ159 (ಅಕ್ಷಯ್ 48, ಸಾಗರ್‌ 30, ಅಜಿತ್ 24ಕ್ಕೆ 2, ಇರ್ಫಾನ್‌ 12ಕ್ಕೆ 1) ಹರಿಯಾಣ 9.3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 160 (ದೀಪಕ್ 103, ವಿನೀತ್ 41) ಫಲಿತಾಂಶ: ಹರಿಯಾಣ ತಂಡಕ್ಕೆ 10 ವಿಕೆಟ್‌ ಜಯ, ಪಂದ್ಯಶ್ರೇಷ್ಠ: ದೀಪಕ್‌ ಮಲಿಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.