ADVERTISEMENT

ಹಾರ್ದಿಕ್ ಆಟ ವೀಕ್ಷಿಸಿದ ಪ್ರಸಾದ್

ಪಿಟಿಐ
Published 28 ಫೆಬ್ರುವರಿ 2020, 19:46 IST
Last Updated 28 ಫೆಬ್ರುವರಿ 2020, 19:46 IST
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ   

ನವೀ ಮುಂಬೈ : ಬೆನ್ನಿನ ಶಸ್ತ್ರಚಿಕಿತ್ಸೆಯ ನಂತರ ಭಾರತ ತಂಡದಿಂದ ಹೊರಗುಳಿದಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಶುಕ್ರವಾರ ಕಣಕ್ಕಿಳಿದರು.

ಡಿ.ವೈ.ಪಾಟೀಲ್ ಟ್ವೆಂಟಿ–20 ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಿಎ ಅವರ ಆಟವನ್ನು ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್ ವೀಕ್ಷಿಸಿದರು.

ಹಾರ್ದಿಕ್ ನಾಲ್ಕು ಭರ್ಜರಿ ಸಿಕ್ಸರ್‌ಗಳನ್ನು ಎತ್ತಿದರು. ಒಂದು, ಎರಡು ರನ್‌ಗಳನ್ನು ಚುರುಕಾಗಿ ಓಡಿದರು. ಅವರು ಐಪಿಎಲ್‌ನಲ್ಲಿ ಆಡುವ ಮುಂಬೈ ಇಂಡಿಯನ್ಸ್‌ ತಂಡದ ನೆರವು ಸಿಬ್ಬಂದಿಯೂ ಈ ಸಂದರ್ಭದಲ್ಲಿ ಹಾಜರಿತ್ತು.

ADVERTISEMENT

ಇದೇ ಸಂದರ್ಭದಲ್ಲಿ ಗಾಯದಿಂದ ಚೇತರಿಸಿಕೊಂಡಿರುವ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಕೂಡ ಇಲ್ಲಿ ಆಡಿದರು. ಅವರೆಲ್ಲರೂ ರಿಲಯನ್ಸ್‌ ಒನ್ ತಂಡವನ್ನು ಪ್ರತಿನಿಧಿಸಿದರು. ಬ್ಯಾಂಕ್ ಆಫ್‌ ಬರೋಡಾ ತಂಡದ ವಿರುದ್ಧ ಪಂದ್ಯ ನಡೆಯಿತು.

38 ರನ್‌ ಗಳಿಸಿದ ಹಾರ್ದಿಕ್ ಬೌಲಿಂಗ್‌ನಲ್ಲಿಯೂ ಮೂರು ವಿಕೆಟ್ ಗಳಿಸಿ ಮಿಂಚಿದರು. ರಿಲಯನ್ಸ್ ತಂಡವು 25 ರನ್‌ಗಳಿಂದ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.