ಕರಾಚಿ : ಅಂತರರಾಷ್ಟ್ರೀಯ ಕ್ರಿಕೆಟ್ಗೆ ಈಚೆಗೆ ನಿವೃತ್ತಿ ಘೋಷಿಸಿದ ಭಾರತದ ಮಹೇಂದ್ರಸಿಂಗ್ ಧೋನಿ ಅವರನ್ನು ಶ್ಲಾಘಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಕ್ಲೇನ್ ಮುಷ್ತಾಕ್ ಈಗ ತೊಂದರೆಗೆ ಸಿಲುಕಿದ್ದಾರೆ.
ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಹಾಕಿರುವ ವಿಡಿಯೊದಲ್ಲಿ ಸಕ್ಲೇನ್, ಧೋನಿಯ ನಾಯಕತ್ವ ಮತ್ತು ಆಟದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧೋನಿಗೆ ಬೀಳ್ಕೊಡುಗೆ ಪಂದ್ಯವನ್ನು ಏರ್ಪಡಿಸುವಲ್ಲಿ ಬಿಸಿಸಿಐ ನಿರ್ಲಕ್ಷ್ಯ ತೋರಿದೆ‘ ಎಂದೂ ಟೀಕಿಸಿದ್ದರು. ಇದರಿಂದಾಗಿ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರಿಗೆ ಛೀಮಾರಿ ಹಾಕಲಾಗಿದೆ.
’ಸಕ್ಲೇನ್ ಅವರ ನಡೆಯು ನಮಗೆ ಮುಜುಗರ ತಂದಿದೆ. ಭಾರತದ ಕ್ರಿಕೆಟ್ನ ವಿಷಯಗಳಲ್ಲಿ ಮೂಗು ತೂರಿಸುವುದು ಸರ್ವಥಾ ಸಮ್ಮತವಲ್ಲ. ಬೀಳ್ಕೊಡುಗೆ ಪಂದ್ಯದ ಏರ್ಪಡಿಸುವುದು ಬಿಡುವುದು ಬಿಸಿಸಿಐನ ಆಂತರಿಕ ವಿಚಾರ. ಅದರಲ್ಲಿ ಸಕ್ಲೇನ್ ಹೇಳುವ ಅಗತ್ಯವೇನಿದೆ‘ ಎಂದು ಪಿಸಿಬಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.