ADVERTISEMENT

ಸಹಾ ಉತ್ತಮ ವಿಕೆಟ್ ಕೀಪರ್‌: ಗಂಗೂಲಿ

ಪಿಟಿಐ
Published 11 ನವೆಂಬರ್ 2018, 17:38 IST
Last Updated 11 ನವೆಂಬರ್ 2018, 17:38 IST
ವೃದ್ಧಿಮಾನ್ ಸಹಾ
ವೃದ್ಧಿಮಾನ್ ಸಹಾ   

ಕೋಲ್ಕತ್ತ: ‘ಭುಜದ ನೋವಿನಿಂದ ವೃದ್ಧಿಮಾನ್ ಸಹಾ ಬಳಲುತ್ತಿರಬಹುದು. ಆದರೆ 10 ವರ್ಷಗಳಿಂದ ಅವರು ಭಾರತದ ಉತ್ತಮ ವಿಕೆಟ್ ಕೀಪರ್ ಆಗಿ ಮಿಂಚಿದ್ದಾರೆ’ ಎಂದು ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಅಭಿಪ್ರಾಯಪಟ್ಟರು.

2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳಿದ ನಂತರ ವೃದ್ಧಿಮಾನ್ ಸಹಾ ಗಮನ ಸೆಳೆದಿದ್ದರು. ಇತ್ತೀಚೆಗೆ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಡಿಸೆಂಬರ್‌ನಲ್ಲಿ ಕೋಲ್ಕತ್ತ ಪರ ರಣಜಿ ಪಂದ್ಯ ಆಡುವ ಸಾಧ್ಯತೆ ಇದೆ.

‘ಡೈವ್ ಮಾಡುವುದರಿಂದ ವಿಕೆಟ್‌ಕೀಪರ್‌ಗಳು ಗಾಯಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಗುಣಮುಖರಾಗಲು ಆಟಗಾರರಿಗೆ ಸಮಯ ಬೇಕಾಗುತ್ತದೆ. ಎಷ್ಟು ಬೇಗ ಗುಣಮುಖರಾಗುತ್ತಾರೆಯೋ ಅಷ್ಟು ಒಳ್ಳೆಯದು’ ಎಂದು ಗಂಗೂಲಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.