ADVERTISEMENT

ರಾಷ್ಟ್ರೀಯ ಕುಸ್ತಿ: ದಾವಣಗೆರೆಯ ಅರ್ಜುನ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 20:27 IST
Last Updated 30 ಸೆಪ್ಟೆಂಬರ್ 2019, 20:27 IST
ಎಚ್‌. ಅರ್ಜುನ್‌
ಎಚ್‌. ಅರ್ಜುನ್‌   

ದಾವಣಗೆರೆ: ಇಲ್ಲಿನ ಕ್ರೀಡಾ ವಸತಿನಿಲಯದ ಕುಸ್ತಿಪಟು ಎಚ್‌. ಅರ್ಜುನ್‌ ಅವರು ಮಹಾರಾಷ್ಟ್ರದ ಶಿರಡಿಯಲ್ಲಿ ಸೋಮವಾರ ಮುಕ್ತಾಯಗೊಂಡ 23 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು.

ಫೈನಲ್‌ನಲ್ಲಿ ಅರ್ಜುನ್‌ ಅವರು ಹರಿಯಾಣದ ಸಂದೀಪ್‌ ವಿರುದ್ಧ 10-2ರಲ್ಲಿ ಗೆಲುವು ಸಾಧಿಸುವ ಮೂಲಕ ಅಕ್ಟೋಬರ್‌ 28ರಿಂದ ಹಂಗರಿಯಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT