ಬೆಂಗಳೂರು: ವಸಂತ್ ಮತ್ತು ಸಂತೋಷ್ ಅವರ ಆಕರ್ಷಕ ಆಟದ ನೆರವಿನಿಂದ ಡಿವೈಇಎಸ್ ತಂಡವು ಹಾಕಿ ಕರ್ನಾಟಕ ಲೀಗ್ ಐದನೇ ಆವೃತ್ತಿಯ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.
ಶಾಂತಿನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅರೆನಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಡಿವೈಇಎಸ್ 9–1 ಗೋಲುಗಳಿಂದ ಆರ್ಡಬ್ಲ್ಯುಎಫ್ ತಂಡವನ್ನು ಪರಾಭವಗೊಳಿಸಿತು.
ವಸಂತ್, 9 ಮತ್ತು 31ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ, ಸಂತೋಷ್ 23 ಮತ್ತು 42ನೇ ನಿಮಿಷಗಳಲ್ಲಿ ಕೈಚಳಕ ತೋರಿದರು.
ಎಸ್.ಪಿ.ದೀಕ್ಷಿತ್ (6), ಪುನೀತ್ (7), ಮಣಿಕಂಠ (11), ಕುಮಾರ್ (32) ಮತ್ತು ಕೆ.ಆರ್.ಭರತ್ (40ನೇ ನಿಮಿಷ) ಕೂಡಾ ಮಿಂಚಿದರು.
ಆರ್ಡಬ್ಲ್ಯುಎಫ್ ಪರ ಸುಶೀಲ್ 12ನೇ ನಿಮಿಷದಲ್ಲಿ ಗೋಲು ಹೊಡೆದರು.
ಇನ್ನೊಂದು ಪಂದ್ಯದಲ್ಲಿ ಸಾಯ್ 8–1 ಗೋಲುಗಳಿಂದ ಪೋಸ್ಟಲ್ ತಂಡದ ಎದುರು ಗೆದ್ದಿತು.
ಸಾಯ್ ತಂಡದ ಹರೀಶ್ ಮುತಗಾರ್ 19 ಮತ್ತು 37ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಆಭರಣ್ ಸುದೇವ್ ಕೂಡಾ (38 ಮತ್ತು 59ನೇ ನಿಮಿಷ) ಎರಡು ಗೋಲು ಗಳಿಸಿದರು.
ರಾಜೇಂದ್ರ (24), ಬಿ.ಎಂ.ಲಿಖಿತ್ (51), ವೀರಣ್ಣ ಗೌಡ (53) ಮತ್ತು ಪ್ಲಾನಾಗಪ್ಪ (57ನೇ ನಿ.) ಅವರೂ ಗಮನ ಸೆಳೆದರು.
ಪೋಸ್ಟಲ್ ತಂಡದ ಎಚ್.ಟಿ.ರಮೇಶ್ ಐದನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.